Home » ಆರೋಗ್ಯಕ್ಕೆ ವೀಳ್ಯದೆಲೆಯ ಉಪಯೋಗಗಳು

ಆರೋಗ್ಯಕ್ಕೆ ವೀಳ್ಯದೆಲೆಯ ಉಪಯೋಗಗಳು

by Praveen Mattimani
health benefits of betel leaves in kannada

ವೀಳ್ಯದೆಲೆ ಎಂದರೆ ಅದರ ಬಗ್ಗೆ ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚಿಗೆ ವಿವರಿಸಬೇಕೆಂದಿಲ್ಲ. ಅದೇ ನಗರ ವಾಸಿಗಳು ಕೂಡ ಪಾನ್ ಶಾಪ್ ಗಳಲ್ಲಿ ಇದನ್ನು ನೋಡಿರಬಹುದು. ಪಾನ್ ಶಾಪ್ ಗಳಲ್ಲಿ ಸಿಗುವಂತಹ ವೀಳ್ಯದೆಲೆಯು ಒಂದು ರೀತಿಯ ಹೈಬ್ರೀಡ್ ಎಲೆ ಎನ್ನಬಹುದು.

ದೇಶೀಯ ವೀಳ್ಯದೆಲೆಯಲ್ಲಿ ಹೆಚ್ಚಿನ ಔಷಧೀಯ ಗುಣಗಳು ಇವೆ ಎಂದು ಹೇಳಲಾಗುತ್ತದೆ. ಭಾರತೀಯರು ಆಯುರ್ವೇದದಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ಇದನ್ನು ಬಳಸಿಕೊಂಡು ಬಂದಿದ್ದಾರೆ.

ಆಯುರ್ವೇದದ ಪ್ರಕಾರ ತಲೆನೋವು, ತುರಿಕೆ, ಗಾಯ, ಮಲಬದ್ಧತೆ ಮತ್ತು ಸವೆತ ಇತ್ಯಾದಿಗಳನ್ನು ತುಂಬಾ ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು.

ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ವೀಳ್ಯದೆಲೆಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು.

ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು, ಹಲ್ಲಿನ ಆರೋಗ್ಯ ಕಾಪಾಡುವುದು, ಗಾಯ ಗುಣಪಡಿಸುವುದು ಮತ್ತು ಮಧುಮೇಹ ನಿಯಂತ್ರಣದಲ್ಲಿ ಇಡುವುದು.

ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ:

ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು.

ಕರುಳಿನಲ್ಲಿ ಗ್ಲೂಕೋಸ್ ಹೀರುವಿಕೆಯನ್ನು ಪ್ರತಿಬಂಧಿಸುವ ಮೂಲಕ ವೀಳ್ಯದೆಲೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ಇದರಲ್ಲಿ ಇರುವಂತಹ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೀ ರ್ಯಾಡಿಕಲ್‍‌ನಿಂದ ಹಾನಿಯಾಗದಂತೆ ತಡೆಯುವುದು.

ಭಾರತೀಯರು ಹೆಚ್ಚಾಗಿ ಊಟವಾದ ಬಳಿಕ ವೀಳ್ಯದೆಲೆ (Betel Leaf Benefits) ಸೇವಿಸುತ್ತಿದ್ದರು. ಇದು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ.

ಮಧುಮೇಹ ಇರುವವರಲ್ಲಿ ಇದು ತೂಕ ಇಳಿಯುವುದನ್ನು ತಡೆಯುವುದು. ಈ ಕಾರಣದಿಂದಾಗಿ ವೀಳ್ಯದೆಲೆಯು ಚಯಾಪಚಯ ಮತ್ತು ಮಧುಮೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವುದು.

ದಂತ ಆರೋಗ್ಯ:

ವೀಳ್ಯದೆಲೆಯನ್ನು ಅಡಕೆ ಹಾಗೂ ತಂಬಾಕು ಜತೆಗೆ ಸೇರಿಸಿಕೊಂಡು ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ತುಂಬಾ ಹಾನಿಕರ ಮಾತ್ರವಲ್ಲದೆ ಇದರಿಂದ ಹಲ್ಲುಗಳು ಕೆಂಪಾಗುವುದು.

ಇದು ನಿಮ್ಮ ಸೌಂದರ್ಯವನ್ನೇ ಕೆಡಿಸುತ್ತದೆ. ಆದರೆ ಏಶ್ಯಾದ ಕೆಲವೊಂದು ರಾಷ್ಟ್ರಗಳಲ್ಲಿ ಇದನ್ನು ಜಗಿಯುವರು ಮತ್ತು ಅದರಿಂದಾಗಿ ಅವರ ಹಲ್ಲುಗಳ ಬಣ್ಣ ಕೂಡ ಕಪ್ಪಾಗುವುದು.

ಆದರೆ ವೀಳ್ಯದೆಲೆಯಲ್ಲಿರುವಂತಹ ಕೆಲವೊಂದು ಅಂಶಗಳು ಹಲ್ಲುಗಳನ್ನು ಬಲಗೊಳಿಸುವುದು. ಆದರೆ ಅಡಕೆ ಮತ್ತು ಸುಣ್ಣದಲ್ಲಿ ಇರುವಂತಹ ಕೆಲವೊಂದು ಅಂಶಗಳು ಆರೋಗ್ಯಕ್ಕೆ ಹಾನಿಕರ ಮತ್ತು ಇದು ಬಾಯಿ ಮತ್ತು ಗಂಟಲಿನ ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆಯಿದೆ.

ಗಾಯ ಬೇಗನೆ ಒಣಗಿಸುವುದು:

ದೇಹದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ನಿಂದಾಗಿ ಗಾಯವು ಒಣಗಲು ತುಂಬಾ ಸಮಯ ಬೇಕಾಗ ಬಹುದು. ಟೈಪ್ 1 ಮಧುಮೇಹ ಇರುವ ಜನರಲ್ಲಿ ಕೂಡ ಗಾಯ ಬೇಗನೆ ಒಣಗುವುದಿಲ್ಲ.

ಇಂತಹ ಸಮಯದಲ್ಲಿ ವೀಳ್ಯದೆಲೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ಗಾಯ ಒಣಗಿದಲು ಹಿಂದಿನಿಂದಲೂ ವೀಳ್ಯದೆಲೆಯನ್ನು ಆಯುರ್ವೇದದಲ್ಲಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ.

ವೀಳ್ಯದೆಲೆಯಲ್ಲಿ ಇರುವಂತಹ ಪಾಲಿಫೆನಾಲ್ ಗಳು ಆಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡುವುದು ಮತ್ತು ಇದು ಗಾಯವು ಬೇಗನೆ ಒಣಗಲು ನೆರವಾಗುವುದು.

ವೀಳ್ಯದೆಲೆಯ ರಸವನ್ನು ನೀವು ಗಾಯಕ್ಕೆ ಹಾಕಿದರೆ ಆಗ ಅದು ಬೇಗನೆ ಒಣಗುವುದು. ಇದು ಕಾಲಜನ್ ಬಿಡುಗಡೆ ಮಾಡಿ ಗಾಯವು ಬೇಗನೆ ಒಣಗಲು ಮತ್ತು ಪುನರುಜ್ಜೀವನಗೊಳ್ಳಲು ಸಾಧ್ಯವಾಗುವುದು.

ಕೆಮ್ಮು ಮತ್ತು ಕಫಗಟ್ಟುವಿಕೆ ನಿವಾರಿಸುವುದು:

ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಪ್ರಕಾರ ವೀಳ್ಯದೆಲೆಯು ಕೆಮ್ಮು ನಿವಾರಣೆ ಮಾಡುವುದು. ಈ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ನೆನಸಬೇಕು. ಇದರ ಬಳಿಕ ಬಿಸಿ ಮಾಡಿ ಎದೆ ಮೇಲಿಟ್ಟರೆ ಆಗ ಕಫಗಟ್ಟುವುದು ನಿಲ್ಲುವುದು.

ಮಕ್ಕಳಿಗೆ ಜೇನುತುಪ್ಪಕ್ಕೆ ವೀಳ್ಯದೆಲೆ (Betel Leaf Benefits) ರಸ ಹಾಕಿ ನೀಡಿದರೆ ಒಣ ಕೆಮ್ಮು ಮತ್ತು ಕಫ ನಿವಾರಣೆ ಆಗುವುದು. ಬ್ರಾಂಕಟೈಸ್ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ.

ಕ್ಯಾನ್ಸರ್ ತಡೆಯುವುದು:

ವೀಳ್ಯದೆಲೆಯಲ್ಲಿ ಉನ್ನತ ಮಟ್ಟದ ಸಫ್ರೋಲ್ ಎನ್ನುವ ಅಂಶವಿದೆ. ಅದಾಗ್ಯೂ ಇದು ಡೈಹೈಡ್ರಾಕ್ಸಿಚಾವಿಕೋಲ್ ಮತ್ತು ಯುಜೆನಾಲ್ ಆಗಿ ಚಯಾಪಚಯಗೊಂಡು ಮೂತ್ರದ ಮೂಲಕ ಹೊರ ಹೋಗುವುದು.

ವೀಳ್ಯದೆಲೆಯಲ್ಲಿ ಆಂಟಿಆಕ್ಸಿಡೆಂಟ್, ಆಂಟಿಮುಟಜೆನಿಕ್ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ವೀಳ್ಯದೆಲೆಯಲ್ಲಿ ಇರುವ ಫೈಥೋಕೆಮಿಕಲ್ ಗಳು ಇದಕ್ಕೆ ಕಾರಣ.

ತಂಬಾಕು ಜತೆಗೆ ಸೇವಿಸದೆ ಇದ್ದರೆ ಇದು ಕ್ಯಾನ್ಸರ್ ಉಂಟು ಮಾಡುವುದಿಲ್ಲ. ಡೈಹೈಡ್ರಾಕ್ಸಿಚಾವಿಕೋಲ್ ಮತ್ತು ಯುಜೆನಾಲ್ ಅಂಶವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಮತ್ತು ಇದರಿಂದ ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುವುದು.

ಇಂತಹ ಗುಣಗಳು ಇಂದಿನ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಕೂಡ ಲಭ್ಯವಾಗಿರುವುದಿಲ್ಲ.

ವೀಳ್ಯದೆಲೆ (Betel Leaf Benefits) ಬಗ್ಗೆ ಇನ್ನಷ್ಟು…!

ವೀಳ್ಯದೆಲೆಗೆ ತುಂಬಾ ಪೂಜ್ಯನೀಯ ಸ್ಥಾನ ನೀಡುವಂತಹ ಭಾರತೀಯರು ಇದನ್ನು ಪಾನ್ ಆಗಿ ಉಪಯೋಗಿಸಿಕೊಳ್ಳುವುರು. ಪಾನ್ ಎಂದರೆ ಅದಕ್ಕೆ ಅಡಕೆ ತುಂಡುಗಳು, ಸುಣ್ಣ ಮತ್ತು ಕೆಲವೊಂದು ರೀತಿಯ ಮೌಥ್ ಪ್ರೆಶ್ನರ್ ಹಾಕಲಾಗುತ್ತದೆ.

ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಹೆಚ್ಚಾಗಿ ಪಾನ್ ಬಳಕೆ ಮಾಡುತ್ತಾರೆ. ಇದು ನಿಜವಾಗಿಯೂ ಒಂದು ರೀತಿಯಲ್ಲಿ ಮೌಥ್ ಪ್ರೆಶ್ನರ್ ಆಗಿ ಕೆಲಸ ಮಾಡುವುದು.

ಶ್ರೀಲಂಕಾ, ಬಾಂಗ್ಲಾದೇಶ, ಬರ್ಮಾ, ಚಿನಾ, ಇಂಡೋನೇಶಿಯಾ, ಮಲೇಶಿಯಾ, ನೇಪಾಳ, ಪಾಕಿಸ್ತಾನ, ಫಿಲಿಫೈನ್ಸ್, ದಕ್ಷಿಣ ಆಫ್ರಿಕಾ ಮತ್ತು ಥಾಯ್ಲೆಂಡ್ ನಲ್ಲೂ ಹೆಚ್ಚಾಗಿ ಬಳಕೆ ಮಾಡುತ್ತಾರೆ.

ವೀಳ್ಯದೆಲೆಯಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ನಾವು ಈಗಾಗಲೇ ತಿಳಿದು ಕೊಂಡಿದ್ದೇವೆ. ಆದರೆ ಇದರಿಂದ ಕೆಲವೊಂದು ಅಡ್ಡ ಪರಿಣಾಮಗಳು ಕೂಡ ಇದೆ. ಇದು ಯಾವುದು ಎಂದು ನಾವು ತಿಳಿಯುವ.

ವೀಳ್ಯದೆಲೆಯ ಅಡ್ಡಪರಿಣಾಮಗಳು:

ವೀಳ್ಯದೆಲೆಯನ್ನು ಅಡಕೆ ಮತ್ತು ಸುಣ್ಣದ ಜತೆಗೆ ಜಗಿಯುತ್ತಿದ್ದರೆ ಆಗ ಈ ವೇಳೆ ವೀಳ್ಯದೆಲೆಯು ಬಿಡುಗಡೆ ಮಾಡುವಂತಹ ಕೆಲವೊಂದು ರಾಸಾಯನಿಕಗಳು ಇವೆರಡ ಜತೆಗೆ ಸೇರಿಕೊಲ್ಳುವುದು. ಈ ರಾಸಾಯನಿಕವು ಕೆಲವೊಂದು ಹಾನಿ ಉಂಟು ಮಾಡಬಹುದು.

ಮನೋಪ್ರಭಾವಕ ಪರಿಣಾಮ. ಕೇಂದ್ರೀಯ ನರಮಂಡಲಕ್ಕೆ ಹಾನಿ ಉಂಟಾಗಬಹುದು. ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ ಗೆ ಕಾರಣವಾಗಬಹುದು.

ಇದು ಬಾಯಿಯಲ್ಲಿ ಒಳ್ಳೆಯ ಸೂಕ್ಷ್ಮಜೀವಿಗೆ ಪರಿಣಾಮ ಬೀರಬಹುದು. ಗರ್ಭಧಾರಣೆ, ಮಕ್ಕಳ ಜನನ ಮತ್ತು ಭ್ರೂಣದ ಬೆಳವಣಿಗೆಗೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದು ಚಟವಾಗಬಹುದು ಮತ್ತು ಹೊರಬರಲು ಕಷ್ಟವಾಗಬಹುದು.

ತಂಬಾಕು, ಅಡಕೆ ಮತ್ತು ಸುಣ್ಣ ಸೇರಿಸಿಕೊಂಡು ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕರ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.

ಹಸಿರಾಗಿರುವಂತಹ ವೀಳ್ಯದೆಲೆಯು ಏಷ್ಯಾ ಮತ್ತು ಆಫ್ರಿಕಾದಲ್ಲಿ ಮೌಥ್ ಪ್ರೆಶ್ನರ್ ಆಗಿ ಬಳಕೆ ಮಾಡುವುದು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮಹತ್ವವು ಇದಕ್ಕೆ ಇದೆ.

ಇದನ್ನು ಸಣ್ಣ ಪ್ರಮಾಣದಲ್ಲಿ ಸೇವನೆ ಮಾಡಿದರೆ ಹಲ್ಲು, ಚರ್ಮ, ಪ್ರತಿರೋಧಕ ವ್ಯವಸ್ಥೆ, ಶ್ವಾಸಕೋಶ ಮತ್ತು ಮೇಧೋಜೀರಕಕ್ಕೆ ನೆರವಾಗುವುದು. ಆದರೆ ಇದನ್ನು ತಂಬಾಕು ಜತೆ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗಿದೆ.

Related Articles