ಜೀವನ ಎಂಬುದು (Motivational Jeevana Quotes in Kannada) ಅನಿಸಿಕೊಡಲು ಸರಳವಾದರೂ ಅರ್ಥಮಾಡಿಕೊಳ್ಳಲು ತುಂಬಾ ಗಂಭೀರ. ಮತ್ತು ಆಳವಾದ ಕಲೆಯಾಗಿದೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅನುಭವ, ಸಂಕಷ್ಟ, ಹರ್ಷದ ಕ್ಷಣಗಳೊಂದಿಗೆ ಜೀವನದ ಪಯಣ ವಿಭಿನ್ನವಾಗಿದೆ. ಜೀವನವನ್ನು ಗೆಲ್ಲಲು ಪ್ರತಿ ಹಂತದಲ್ಲೂ ನಮ್ಮನ್ನು ಪ್ರೇರೇಪಿಸುವ, ಸ್ಫೂರ್ತಿಯ ಜೀವನ ಕ್ವೋಟ್ಸ್ (Jeevana Life Quotes in Kannada) ಬಹಳ ಮುಖ್ಯವಾಗುತ್ತವೆ. ಇವು ನಮ್ಮ ಮನಸ್ಸಿಗೆ ಚೈತನ್ಯ ತುಂಬಿ, ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವ ಶಕ್ತಿ ನೀಡುತ್ತವೆ.
ಹೆಮ್ಮೆಯಿಂದ ಬಾಳಲು, ಸಂಕಟಗಳಲ್ಲಿ ನಲಿಯದಿರುವಂತೆ ಬೇರೆಯವರ ಅನುಭವ, ತಿಳಿವಳಿಕೆ, ಮತ್ತು ಬುದ್ಧಿಮಾತುಗಳು ನಮಗೆ ಮಾರ್ಗದರ್ಶಕವಾಗುತ್ತವೆ. ಮಹಾನ್ ವ್ಯಕ್ತಿಗಳ ಜೀವನಕಥೆಗಳಿಂದ ಸ್ಪೂರ್ತಿ ಪಡೆದ ಈ ಜೀವನ ಕ್ವೋಟ್ಸ್ (Best Jeevana Life Quotes in Kannada).
ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಬಹುದು. ಮತ್ತು ನಿತ್ಯ ಬದುಕಿನ ಸವಾಲುಗಳಿಗೆ ಧೈರ್ಯದಿಂದ ಮುಖಾಮುಖಿಯಾಗಲು ಪ್ರೇರೇಪಿಸಬಹುದು. ಇಲ್ಲಿ ನೀಡಲಾಗಿರುವ ಜೀವನ ಕ್ವೋಟ್ಸ್ ನಿಮ್ಮಲ್ಲಿ ಒತ್ತಡ, ಆತಂಕ, ನಿರಾಶೆ ಹೀನ್ಮನಸ್ಸುಗಳನ್ನು ತೊಡೆದುಹಾಕಿ, ಹೊಸ ಚೈತನ್ಯವನ್ನು ತುಂಬುವ ಹೃದಯಸ್ಪರ್ಶಿ ಸಂದೇಶಗಳನ್ನು ಹೊಂದಿದೆ.
ಈ ಕ್ವೋಟ್ಸ್ಗಳ (Top Jeevana Life Quotes in Kannada) ಮೂಲಕ ನಿಮ್ಮ ದಿನವನ್ನು ಪ್ರಭಾವಶಾಲಿಯಾಗಿ ಮಾಡಿಕೊಳ್ಳಿ, ಹೊಸ ದೃಷ್ಟಿಕೋನ ಪಡೆಯಿರಿ. ಮತ್ತು ಜೀವನದ ಪ್ರತಿ ಕ್ಷಣವನ್ನು ಪೂರ್ಣವಾಗಿ ಅನುಭವಿಸಿ. ಜೀವನದಲ್ಲಿ ಕಲಿಯುವುದಕ್ಕೆ ಸಾಕಷ್ಟಿದೆ. ಹುಟ್ಟಿದ ಕ್ಷಣದಿಂದ ಸಾಯುವ ಕಡೆಯವರೆಗೆ ನಾವು ಒಂದಿಲ್ಲೊಂದು ಜೀವನ ಪಾಠವನ್ನು ಕಲಿಯುತ್ತಲೇ ಇರುತ್ತೇವೆ.
ಎಲ್ಲರಿಗೂ ನೋವಾದಾಗ, ತುಂಬಾ ಬೇಸರವಾದಾಗ, ಅಹಿತಕರ ಘಟನೆಗಳು ಸಂಭವಿಸಿದಾಗ ಸಂದರ್ಭಕ್ಕೆ ಅನುಗುಣವಾಗುವ ಮಾತು, ನುಡಿಮುತ್ತು, ನುಡಿಗಟ್ಟುಗಳು ನೆನಪಾಗುತ್ತದೆ. ಪ್ರತಿ ಸಾಲು ನಿಮ್ಮ ಆತ್ಮಕ್ಕೆ ಪ್ರೇರಣೆ ನೀಡುವ ಹಾಗೆ ಇದು ನಿಮಗೆ ಸಹಾಯಕರಾಗುತ್ತದೆ.
Kannada Quotes:

“ದುಡ್ಡು ಕೊಟ್ಟು ಕಲಿಯುವುದು ಶಾಲೆಯಲ್ಲಿ ಕಣ್ಣೀರಿಟ್ಟು ಕಲಿಯುವುದು, ಜೀವನದಲ್ಲಿ.”

“ಚಿಂತೆಗಿಂತ ದೊಡ್ಡ ಕಾಯಿಲೆ ಇಲ್ಲ… ಖುಷಿಗಿಂತ ದೊಡ್ಡ ಔಷಧಿ ಇಲ್ಲ.”

“ನಾಳೆ ಎಂಬುವುದು ಸಾವು ಇವತ್ತು ಎಂಬುವುದು ಬದುಕು ಈಗ ಎನ್ನುವುದೇ ಸಾಧನೆ ಇಷ್ಟೇ – ಜೀವನ.”

“ನೂರು ಸುಳ್ಳು ಹೇಳಿ ನಂಬಿಸುವ ಪ್ರಯತ್ನ ಮಾಡುವುದಕ್ಕಿಂತ.. ಒಂದು ನಿಜ ಹೇಳಿ ಕ್ಷಮಿಸಿ ಎಂದು ಹೇಳುವುದು ಬಹಳ ಉತ್ತಮ.”

“ಅರಿಯದೆ ಆದ ಒಂದು ತಪ್ಪು ಬದುಕಿನ ಪಯಣವನ್ನೇ ಬದಲಿಸುತ್ತದೆ.”

“ಹಣೆಬರಹದಲ್ಲಿ ಜೀವನವಿಲ್ಲ, ಹಣೆಯ ಬೆವರಿನಲ್ಲಿ ಜೀವನವಿದೆ.”

“ನಮ್ಮವರಿಗೇ ಪ್ರೀತಿ ನೀಡಲಾಗದಷ್ಟು ಬಡವರಾಗಬೇಡಿ. ಸಮಯವೇ ಇಲ್ಲ ಎಂದು ಹೇಳುವಷ್ಟು ಆತ್ಮವಂಚಿತರಾಗಬೇಡಿ.”

“ಯಾರನ್ನಾದರೂ ತುಳಿಯುವ ಮೊದಲು ನೀನು ನಿಂತಿರುವ ಜಾಗ ನೆನಪಿರಲಿ.”

“ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ.”

“ನಮ್ಮ ತಪ್ಪನ್ನು ನಮಗೆ ಹೇಳುವವರು ಹಿತೈಷಿ.. ನಮ್ಮ ತಪ್ಪನ್ನು ಬೇರೆಯವರಿಗೆ ಹೇಳುವವರು ಬೇವರ್ಷಿ.”

“ಕಾರಣವಿಲ್ಲದೆ ಹೃದಯತುಂಬಿ ನಗುತ್ತಿದ್ದ ಕಾಲವದು. ಕಾರಣವನ್ನು ಮರೆಮಾಚಲು ನಗುವ ಕಾಲವಿದು.”

“ತಾನಾಗಿ ಬಂದದ್ದನ್ನು ಸ್ವೀಕರಿಸು, ತಿರಸ್ಕರಿಸಬೇಡ. ನಿನಗೆ ಕೊಡಬೇಕಾದ್ದನ್ನು ದೇವರು ಕೊಟ್ಟೆ ಕೊಡುತ್ತಾನೆ.”

“ಯಾರನ್ನೋ ಮೆಚ್ಚಿಸಲಿಕ್ಕೆ ನಾನು ಬದುಕಬೇಕೆಂದಿಲ್ಲ. ನನ್ನನು ನಂಬಿದವರಿಗೆ ಒಳ್ಳೆಯದನ್ನು ಮಾಡಿದರೆ ಸಾಕು.“

ಅತ್ಯಂತ ಒಳ್ಳೆಯ ಆಯುಧ “ಸಹನೆ” ಬಹು ದೊಡ್ಡ ಪ್ರತೀಕಾರ “ಮೌನ”.

“ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ.”
Kannada Life Quotes

“ನಿದ್ರೆ ಎಷ್ಟು ಅದ್ಭುತವೆಂದರೆ, ಬಂದರೆ ಎಲ್ಲವನ್ನೂ ಮರೆಸುತ್ತದೆ. ಬರದಿದ್ದರೆ ಎಲ್ಲವನ್ನೂ ನೆನಪಿಸುತ್ತದೆ.“

“ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹನ ಬಿಟ್ಟು ಹೋಗುತ್ತೆ. ಇನ್ನು ಮನುಷ್ಯರು ಯಾವ ಲೆಕ್ಕ.“

“ಕಂಡು ಕಾಣದಂತೆ ಹೋದವರ ಮುಂದೆ ಕತ್ತೆತ್ತಿ ನಡೆಯಬೇಕು. ಮುಖ ತಿರುಗಿಸಿ ಹೋದವರ ಮುಂದೆ ಮಂದಹಾಸದಿ ಮೆರೆಯಬೇಕು. ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ.”

“ಜೀವನದಲ್ಲಿ ಕಷ್ಟಗಳು ಬರಲೇ ಬೇಕು ಆಗಲೇ ಗೊತ್ತಾಗೋದು ಯಾರು ಕೈ ಹಿಡಿತಾರೆ ಯಾರು ಕೈ ಕೊಡುತ್ತಾರೆ ಅಂತ.”

“ಎತ್ತರಕ್ಕೆ ಬೇಳಿಬೇಕು ನಿಜಾ..! ಅದಕ್ಕಾಗಿ ಮೆಟ್ಟಿಲುಗಳನ್ನು ತುಳಿಬೇಕೆ ಹೊರತು ಇನ್ನೊಬ್ಬರನ್ನು ತುಳಿದು ಅಲ್ಲ.”

“ಸೃಷ್ಟಿಯಲ್ಲಿ ಯಾವುದೇ ತಪ್ಪಿಲ್ಲ, ತಪ್ಪಿರುವುದು ಎಲ್ಲಾ ನಮ್ಮ ದೃಷ್ಟಿಯಲ್ಲಿ.”

“ಪಡೆದುಕೊಳ್ಳಬೇಕು ಎನ್ನುವ ಆಸೆ ಹುಟ್ಟಿದಾಗಲೇ ಕಳೆದುಕೊಳ್ಳುವೆ ಎನ್ನುವ ಭಯ ಹುಟ್ಟಿಕೊಳ್ಳುತ್ತದೆ .”

“ನಿನ್ನ ವೈರಿಯೇ ಮನೆ ಬಾಗಿಲಿಗೆ ಬಂದರೂ ನಗು ನಗುತ್ತಾ, ಸ್ವಾಗತಿಸು, ಏಕೆಂದರೆ ತನ್ನನ್ನು ಕಡಿಯುವ ಮನುಷ್ಯರಿಗೂ ಮರ ನೆರಳನ್ನೇ ನೀಡುತ್ತದೆ .”

“ಜೀವಾ ಇದೆ ನೆಮ್ಮದಿ ಇಲ್ಲ, ಜೀವನ ಇದೆ ಅದಕ್ಕೆ ಅರ್ಥವಿಲ್ಲ.”

“ಯಾರ ಮಾತಿಗೂ ನೀ ಅಂಜಬೇಡ ಯಾರ ಆಸೆಯಂತೆಯೂ ನೀ ಇರಬೇಡ ಯಾರನ್ನೂ ನಂಬಿ ನೀ ಬದುಕಬೇಡ ನಿನ್ನ ಜೀವನ ನಿನಗೆ ನೀ ಮರೆಯಬೇಡ.”

“ನೋವಿನಲ್ಲಿ ಜೊತೆಯಾಗಿ ಇರ್ತೀನಿ ಅಂತ ಹೇಳುವುದಕಿಂತ, ನೋವು ಬರದೆ ಇರೋ ಹಾಗೆ ನೋಡಿಕೊಳ್ಳುವುದು ನಿಜವಾದ ಪ್ರೀತಿ .”

“ಬಿಟ್ಟು ಹೋದ ಖುಷಿ ಎಷ್ಟು ಹಣ ಕೊಟ್ಟರು ಮತ್ತೆ ಬಾರದು.”

“ಒಳ್ಳೆ ಟೈಮ್ ಬರುವವರೆಗೂ ಕೆಟ್ಟ ಟೈಮ್ ಜೊತೆ ಜೀವನ ನಡೆಸಲೇಬೇಕು..”

“ನೀವು ಇರುವ ಸ್ಥಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ ಯಾಕೆಂದರೆ ಇಲ್ಲಿ ಆರೈಕೆ ಮಾಡುವವರಿಗಿಂತ ಆಡಿಕೊಳ್ಳುವವರೆ ಜಾಸ್ತಿ.”

“ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು ನಂಬಿಕೆ ಇದ್ದಕಡೆ ಪ್ರೀತಿ ತಾನಾಗೇ ಒಲಿಯುತ್ತದೇ.”
Kannada Love Quotes

“ನಮ್ಮವರೇ ನಮ್ಮನ್ನು ತಪ್ಪಾಗಿ ತಿಳಿದುಕೊಂಡಾಗ ಒಬ್ಬಂಟಿಯಾಗಿ ಇರುವುದೇ ಒಳ್ಳೆಯದು …”

“ನಾನು ಜೀವನದಲ್ಲಿ ಎಲ್ಲರಿಂದಲೂ ದೂರ ಇದ್ದೀನಿ ಎಂದರೇನನಗೆ ಯಾರು ಇಲ್ಲ ಅಂತ ಅಲ್ಲ.ನಾಟಕ ಮಾಡುವ ಸ್ನೇಹ/ ಸಂಬಂದಗಳು ನನಗೆ ಅವಶ್ಯಕತೆ ಇಲ್ಲ ಅಂತ.”

“ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿ ಇಡಿ ದೇವರನ್ನು ಹೊರತುಪಡಿಸಿ ನಿಮ್ಮ ಕಣ್ಣೀರು, ನೋವು ಮತ್ತು ದುಃಖವನ್ನು ಯಾರಿಂದಲೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.”

“ಹೆದರಬೇಡ!! ನೀ ಹೆದರಿದಷ್ಟೂ ದಬ್ಬಾಳಿಕೆ ನಡೆಸುವರು ಎಂಬುದು ಮರೆಯಬೇಡ.”

“ಇಳಿಜಾರಿನ ಹಾದಿಯಲ್ಲಿ ಕನಸುಗಳು ಜಾರುತಿವೆ ಏಕಾಂತವಾಗಿ.”

“ಪ್ರತಿಯೊಂದು ಬದಲಾವಣೆಯ” ಹಿಂದೆ ಬಲವಾದ ಪ್ರೇರಣೆಯೊಂದಿರುತ್ತದೆ.”

“ಬಾರದ ನಿದಿರೆಗೆ ಕಣ್ಣಿರೆ ಜೊತೆಯಾಗಿವೆ ಕಳೆದ ದಿನಗಳನ್ನು ನೆನೆದು.”

“ಅದೇನೋ ಹೇಳಬೇಕೆಂದು ಈ ಮನಸ್ಸು ಹಠಮಾಡಿದೆ ಕೇಳುವ ಹೃದಯವೊಂದಿಲ್ಲವೇ.”

“ಎಷ್ಟೋ ಸಾರಿ ನೀ ನಗುವ ಪರಿ. ನಿನ್ನ ವ್ಯಕ್ತಿತ್ವವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ.”

“ಬದುಕೋಕೆ ಬೇಕಿರೋದು ಅನ್ನ, ಎಷ್ಟಿದ್ದರೇನು ನಿನ್ನ ಬಳಿ ತಿನ್ನಲಾಗದ ಚಿನ್ನ.”

“ಕೆಲವಂದು ಸರಿ ದಾರಿಗಳು ನಮ್ಮನ್ನ ಕಾಯಿತಿರುತ್ತವೆ ಹೋಗುವ ಮನಸ್ಸು ನಮ್ಮದಾಗಿರಬೇಕು ಅಷ್ಟೇ.”

“ಇರೋವರೆಗೂ ಖುಷಿಯಾಗಿರಿ ಯಾರಿಗೊತ್ತು ಭಗವಂತ ಯಾವಾಗ ಬೇಕಾದ್ರು ಬಸ್ ಟಿಕೆಟ್ ಕಳ್ಸ್ಬೋದು.”

“ಆ ಕ್ಷಣ ಗೆಲ್ಲಲು ಹೋಗಿ, ಅವರನ್ನೇ ಕಳೆದುಕೊಳ್ಳಬೇಡ,,”

“ಪರಿಶ್ರಮ ಮೆಚ್ಚುವಂತಿರಬೇಕು ಇನ್ನೊಬ್ಬರಿಂದ ಕಿತ್ತುಕೊಳ್ಳುವಂತಲ್ಲ.”

“ದುದ್ದೆಂಬ ಪರಮಾತ್ಮನ ಹಿಂದೆ,,,ದುನಿಯಾ ಎಂಬ ಮಹಾತ್ಮಾ”
Inspiration Quotes in Kannada

“ಭಾವನೆಗಳನ್ನ ಹೇಳದಿ ರುವುದೇ ಒಳ್ಳೆಯದು ಬೆಲೆ ಸಿಗದ ಜಾಗದಲ್ಲಿ.”

“ಅವರಿಗೆ ಬೇಕಾದವರು ತಪ್ಪು ಮಾಡಿದರೂ ಅದು ಸರಿಯಂತೆ.”

“ನಂಬಿಕೆ ಕಳೆದೋಗಿದೆ ಯೋಚೆನೆಯೆಲ್ಲ ತಲೆಕೆಳಗಾಗಿದೆ ನಕ್ಕರು ಅತ್ತರು ಎಲ್ಲ ನಾಟಕ ಅನ್ಸಿದೆ.”

“ಇರುವಾಗ ಪ್ರೀತಿಸದ ಜನರು; ಸತ್ತಮೇಲೆ ಬಿಕ್ಕಿ ಬಿಕ್ಕಿ ಅಳುವರು.”

“ಸರಿದ ಸಮಯಕ್ಕೆ ದುಃಖಿಸದಿರು ಉಳಿದಿರುವ ಸಮಯಕ್ಕೆ ಹೆಚ್ಚು ಒತ್ತುಕೊಡು..”

“ದುಡ್ಡಿದ್ದರೆ ಮಾತ್ರಕ್ಕೆ ಪ್ರೀತ್ಸೋದು ಪ್ರೀತೀನೇ ಅಲ್ಲ ಅದು ಶೋಕಿ ಅಲ್ಲದೆ ಬೇರೇನೂ ಅಲ್ಲ.”

“ನನ್ನ ಬದ ಲಾದ ವರ್ತನೆಯನ್ನು ಮಾತ್ರ ಗುರ್ತಿಸುವ ಜನ ಅವರ ಯಾವ ವರ್ತನೆಯಿಂದ ನಾನು ಬದ ಲಾದೆ ಎಂದು ಗುರ್ತಿಸುವುದೇ ಇಲ್ಲ.”

“ನಾನಂದುಕೊಂಡಿದ್ದು ಎಲ್ಲರು ನಮ್ಮೋರು ಆದರೆ ಬದುಕು ಅಂದಿದ್ದು ನೀನಂದುಕೊಂಡಂಗಿಲ್ಲ ಎಲ್ಲರೂ.”

“ನೆನಪಿನ ಸಂತೆಲಿ ನಾನು ಮಾಲೀಕ; ನೆನಪುಗಳ ಜೊತೆ ಹೊರಟ ನಾವಿಕ.”

“ಬಯಸದೇ ಬಂದವರು ಬಯಸಿದಾಗ ದೂರಾದರು.”

“ಎಲ್ರುಗೂ ನಿನ್ ಒಳ್ಳೆಯವನೇ ನಿನ್ ಹತ್ರ ದುಡ್ಡಿದ್ದರೆ ಮಾತ್ರ.”

“ಆಸೆಗಳು ಕೂಡ ತುಟಿ ಕಚ್ಚಿಕೊಂಡಿವೆ ಕಾಣದ ನಾಳೆಯ ಬದುಕುವ ಭರವಸೆಯಲಿ.”

“ಉಸಿರಿನ ತಂಗಾಳಿಗೆ ನಿನ್ನೆಸರ ಬೆರೆಸುವ ಆಸೆ ನನಗೆ.”

“ನನ್ನೆದೆಯ ಬಾಗಿಲಿಗೆ ನಿನ್ನೊಲವ ಏಯನಗಳೇ ಶೃಂಗಾರ.”

“ನಾಳೆ ಎಂಬುದು ಮಿಥ್ಯ ಇಂದು ನಡೆಯುವುದು ಮಾತ್ರ ಸತ್ಯ.”
Inspirational Quotes in Kannada Language

“ಪರಿಚಯ ಇಲ್ಲವೆಂಬಂತೆ ನಟಿಸೋರಿಗೆ, ಅಪರಿಚಿತರಾಗಿರೋದೇ ಒಳ್ಳೆಯದು.”

“ಬಿಟ್ಟು ಬಿಡು ಮುನಿಸು; ಸಾಧ್ಯವಾದರೆ ಕ್ಷಮಿಸು.”

“ನಿನಗಾಗಿ ಕಾಡು ಕುಳಿತ ಒಂಟಿ ಹೃದಯವಿದು ಬರಬಾರದೆ ನೀ ಒಮ್ಮೆ ದಯೆತೋರಿ.”

“ಬರೆದಿಟ್ಟ ಮೌನವ ಸಾಲಿನಲ್ಲಿ ನನ್ನಯ ಏಕಾಂತ ಗುನುಗುತಿದೆ ಹಾಡಾಗಿ.”

“ಅಮೃತದಂತ ಅವಳ ಪ್ರೀತಿಯಲ್ಲಿ ಪಾವನವಾದ ಪ್ರೀತಿ ನನ್ನದು… ಇರೋವರೆಗೂ ಇದ್ದುಬಿಡು ಜೊತೆಯಲಿ ಅದ ಬಿಟ್ಟು ಈ ಮನಸ್ಸು ಬೇರೇನೂ ಕೇಳದು.”

“ಅವಳ ಕಣ್ಣಿನ ನಕ್ಷತ್ರದ ಬೆಳಕಿನ ಹೊದಿಕೆಯಲ್ಲಿ ಬೆಚ್ಚನೆ ಮಲಗಿರುವ ಪ್ರೇಮಿ ನಾನು.”

“ಅವರಿಗೆ ನಿನ್ನ ಅವಶ್ಯಕತೆ ಮುಗಿದರೆ ನಿನ್ನನ್ನು ಮರೆತಂತೆಯೇ.”

“ನಿನಗಾಗಿಯ ಬರೆಯುವೆ ನಾನು, ಖಾಲಿ ಖಾಗದದ ಪುಟಗಳಲಿ,, ನಿನ್ನ ನೆನೆದರೆ ಸಾಕು, ಪದಗಳು ತಾನಾಗಿಯೇ ಮೂಡುವವು, ಕಾಣಿಸದ ಸಾಲುಗಳಲಿ.”

“ನೀವು ಮತ್ತು ನಿಮ್ಮವರ ನಡುವೆ ಮೂರನೆಯವರು ಬಾರದಂತೆ ನೋಡಿಕೊಳ್ಳಿ ಏಕೆಂದರೆ ಸಂಬಂಧಗಳನ್ನು ಹಾಳು ಮಾಡುವವರು ಅವರೇ ಆಗಿರುತ್ತಾರೆ.”

“ಜೀವನವನ್ನು ನಿರ್ಧರಿಸುವುದು ಅ ನಿಮ್ಮ ಆಯ್ಕೆಗಳೇ.”

“ನಿನ್ನ ನೆನಪುಗಳ ಸುಡಲು ನೀನೇ ಹೇಳಿ ಹೋದೆ, ಆದರೆ ಅದಕ್ಕೆ ಅನಾಥವಾದ ಅನುರಾಗದ ಕಣ್ಣೀರಿನ ಮಳೆ ಬಿಡುತ್ತಿಲ್ಲ.”

“ಕಡಲ ಕೊನೆಯಲ್ಲಿ ಮಡಿವ ಸೂರ್ಯನೂ ಮತ್ತೆ ಹುಟ್ಟಿ ಬರುವನು,, ನಿನ್ನ ನೆನಪುಗಳ ಹಾಗೆ.”

“ನೀನು ನಿನ್ನವರು ಎಂದು ಭಾವಿಸಿರುವ ಎಷ್ಟೋ ಜನರು ನಿನ್ನ ಸೋಲಿಗಾಗಿಯೇ ಕಾಯುತ್ತಾ ಕುಳಿತಿರುತ್ತಾರೆ.”

“ಮನಸು ಮಸಣವಾಗಿದ್ದರೂ ಕಿರುನಗೆಯ ಬೀರಲು ಯತ್ನಿಸಿವೆ ಎಷ್ಟೋ ನೊಂದ ಹೃದಯಗಳು, ನೋವು ಮರೆಯಲಲ್ಲ , ಆ ನೋವು ಯಾರಿಗೂ ಕಾಣದಿರಲಿಯೆಂದು.”

“ಅಂದದ ಅಹಂಕಾರದಿ ಎಂದಿಗೂ ಬೀಗಬೇಡ,, ಒಂದು ದಿನ ನಿನ್ನ ಚರ್ಮವೂ ಸುಕ್ಕಾಗುವುದು.”
Kannada Motivation Quotes

“ಯಾರಿಂದಲೂ ಏನನ್ನು ನಿರೀಕ್ಷಿಸಬೇಡ,, ಅದರಿಂದ ನಿನಗೆ ಕೊನೆಗೆ ಸಿಗುವುದು ಕೇವಲ ನಿರಾಸೆ, ಬೇಸರಗಳಷ್ಟೇ.”

“ಕಾಣಿಸದ ಸಾಲುಗಳ ಕವನದಂತ ಈ ಒಲವಿನ ಹಾದಿಯಲಿ ಅಳಿಸಲಾಗದ ನಿನ್ನ ಹೆಜ್ಜೆಗುರುತುಗಳ ಜೊತೆಗೇ ನನ್ನ ಈ ಪಯಣ.”

“ಪ್ರೀತಿಯಿಂದ ಶೃಂಗರಿಸಿದ ಮನದ ಮಂಟಪದಲ್ಲಿ ನಿನ್ನ ಹೊರತು ಇನ್ನಾರಿಗೂ ಜಾಗವಿಲ್ಲ.”

“ಹೋರಾಟದ ಬದುಕಿನಲಿ ಮೂಕಾದ ಭಾವನೆಗಳು.”

“ಕಷ್ಟನು ಬೇಕು ಸುಖನು ಬೇಕು ನನಗೆ. ಯಾಕೆ ಗೊತ್ತಾ ಯಾಗುವುದೆಲ್ಲಾ ಒಳ್ಳೇದಕ್ಕೆ ಅಂತಾ ತಿಳಿದುಕೊಳ್ಳುತಿನಿ ಅದಕ್ಕೆ.”

“ನಿನ್ನದೇ ಕನಸುಗಳ ಸಂತೆಯಲ್ಲಿ ಕಳೆದುಹೋಗಿದೆ ನನ್ನ ಪುಟ್ಟ ಹೃದಯ ಅನುರಾಗದ ಹುಡುಕಾಟದಲಿ.”

“ಹಣೆಬರಹ ದೇವರನ್ನೇ ಬಿಡಲ್ಲ ಅಂದಮೇಲೆ ನಾವುಗಳು ಲೆಕ್ಕ ನಾ.”

“ನಂಬಿಕೆ ಎಂಬುದು ಕನ್ನಡಿಯಿದ್ದಂತೆ ಒಡೆದದ್ದನ್ನು ಕೂಡಿಸಿದರೂ ಮುಂಚಿನ ಪ್ರತಿಬಿಂಬ ಸಿಗದು.”

“ಮನಸ್ಸಿನಂಗಳದಲಿ ಭಾವನೆಯ ಬಿತ್ತರಿಸಿ ಬೆಳೆದ ಕನಸಿನ ಹೂಗಳು ಕಾಯುತ್ತ ಕುಳಿತಿವೆ ನೀನೆಂದೂ ಭಾಶದ ದಾರಿಯಲಿ.”

“ನೀನಿನ್ನು ಜೊತೆಗಿರದಿದ್ದರೇನು, ನಿನ್ನ ನೆನಪುಗಳೇ ಸಾಕಿನ್ನು, ಉಳಿದ ಜೀವನದ ಕೆಲವು ಪುಟಗಳ ತಿರುವಿ ಹಾಕಲು..”

“ಎದೆಯ ಗಡಿಯಾರವು ಕ್ಷಣ ಕಾಲ ನಿಲ್ಲುವುದು ಕನಸುಗಳನ್ನು ಹೊತ್ತ ದೋಣಿ ನೆನುಪುಗಳ ನದಿಯ ದಾಟುವಾಗ, ದಡವ ಸೇರುವ ಮುನ್ನವೇ ಮತ್ತೆ ನಿನ್ನ ನೆನಪಿದಾಗ.”

“ಸೂರ್ಯ ಬೆಳಕಲ್ಲಿ ಚಂದ್ರನ ನೆರಳಲ್ಲಿ ನೆನಪುಗಳ ಸವಿ ನೆನಪಲ್ಲಿ ಕಣ್ಣೀರು ಯಾರಿಗೋಸ್ಕರ ನಿನಗೆ ಗೊತ್ತಿಲ್ಲವೇ.”

“ನಿನೋಪ್ಪದ ಭಯದಲ್ಲೇ ಒಲವ ನಿವೇದನೆ ಮಾಡದೇ ಹೋದೆ ಅದು ನಿನ್ನನ್ನು ಇನ್ನೊಬ್ಬರೊಡನೇ ನೋಡಿ ಎದೆಗೆ ಇರಿದಂತಾಗಿದೆ ಇಂದು.”

“ಕಡಲ ದಡದಲ್ಲಿ ಇಟ್ಟ ಹೆಜ್ಜೆ ಗುರುತುಗಳ ಅಳಿಸಬಹುದು ಆ ಅಲೆಗಳು,, ಆದರೆ ಈ ಎದೆಯ ದಡದಲ್ಲಿ ನೀ ಇಟ್ಟ ಹೆಜ್ಜೆ ಗುರುತಗಳ ಅಳಿಸಲು ಬಿಡದು ಎಂದಿಗೂ ಆ ನಿನ್ನ ನೆನಪುಗಳು.”

“ಕೂಡಿಟ್ಟ ಕನಸುಗಳ ಬುತ್ತಿಯಲೇ ಹೊತ್ತು ತಿರುಗುತ್ತಿದ್ದ ಮುಗ್ಧ ಮನಸ್ಸಿನ ಹೃದಯಕೆ ಇಂದು ನೀ ತೊರೆದು ಕಾರ್ಮೋಡವೇ ಕವಿದಂತಾಗಿದೆ.”
Motivational Quotes in Kannada

“ಗುಂಪಿನ ಜೊತೆ ಯಾರು ಬೇಕಾದರೂ ನಿಲ್ಲುವರು, ಒಬ್ಬಂಟಿಯಾಗಿ ನಿಲ್ಲುವ ನಿರ್ಭೀತಿ ನಿನ್ನಲ್ಲಿರಬೇಕು.”

“ಕೋಪದಲಿ ದುಡುಕಿ ವರ್ತಿಸುವ ಮುಂಚೆ ಆ ಎರಡು ಕ್ಷಣ ತಾಳ್ಮೆಯಿಂದಿದ್ದರೆ ಭವಿಷ್ಯದಲಿ ವಿಷಾದಿಸುವುದು ತಪ್ಪುವುದು.”

“ಮಡಿದ ಕನಸುಗಳ ಶವಯಾತ್ರೆಗೆ ಹೆಗಲು ಕೊಟ್ಟಿವೆ, ನಿರ್ಲಿಪ್ತ ಭಾವನೆಗಳಿಂದು.”

“ವರ್ತಮಾನದಲ್ಲಿ ಜೀವಿಸು ಭೂತವನ್ನ ಮರೆಯದೆ ಭವಿಷ್ಯಕ್ಕೆ ಹೆದರದೆ.”

“ಪ್ರೀತಿ ಸೋತಾಗ ಸಾಯೋ ಭಾವನೆಗಳ ಸಮಾಧಿನೇ ಎದೆನ ಗಟ್ಟಿ ಮಾಡ್ತಾ ಹೋಗತ್ತೆ.”

“ಕನಸಲ್ಲಿ ನೀನು ನನ್ನವಳಾದರೂ ವಾಸ್ತವದಲ್ಲಿ ನನ್ನ ಪಾಲಿಗೆ ನೀನು ಕನಸಾಗೇ ಉಳಿದಿರುವೆ.”

“ಕನಸು ನನಸಾದಂತೆ ಕನಸಾಗಿ, ಆ ಕನಸು ನನಸಾಗದ ಕನಸಾಗೇ ಉಳಿದು , ಜೀವನದ ಮುಂದಿನ ಕನಸುಗಳಿಗೆ ಅಡ್ಡಿ ಪಡಿಸುವ ಕನಸು ಎಂದಿಗೂ ಬೀಳದಿರಲಿ.”

“ಖಾಲಿ ಪುಟದ ಕಾಣದ ಪದಗಳ ಮೂಕ ಹೃದಯದ ವೇದನೆಯನ್ನಾಲಿಸದೆ, ನೀ ಹಾಗೆಯೇ ನಡೆದು ಹೋದೆ ಒಮ್ಮೆಯೂ ತಿರುಗಿ ನೋಡದೇ.”

“ನನ್ನ ಜೀವನದ ಸಾರಾಂಶವೇ ನೀನಾಗುತ್ತೀಯ ಎಂದು ಭಾವಿಸಿದ್ದೆ,,, ಮುನ್ನಡಿಯನ್ನಷ್ಟೇ ಮುಗಿಸಿ ನೀ ಹೊರಟುಬಿಟ್ಟೆ.”

“ಈ ಜೀವನ ಸಾಗಿದೆ, ತಿಳಿದಿಲ್ಲ ಎಲ್ಲಿಗೆ… ಮಧುರ ನೆನಪುಗಳಷ್ಟೇ ನೀಡಿತಿರುವವು ಭರವಸೆಯ, ಈ ಮುಗಿಯದ ಬದುಕಿಗೆ… ನನ್ನ ಎದೆಯಲ್ಲಿ ಅಮರವಾಗಿ ಉಳಿದ ಆ ನಿನ್ನ ಒಲವು ಮಾಡಿವುದಾದರೂ ಎಂದಿಗೆ? ಎಷ್ಟೋ ಪ್ರಶ್ನೆಗೆ ಉತ್ತರ ಹುಡುಕುತ್ತ ಬಳಲಿದ ಈ ಹೃದಯ ಕೂಗಿ ಹೇಳಿದೆ, ಒಲವ ಬಯಸದಿರು ಇನ್ನು ಕೊನೆಯ ಉಸಿರಿನವರೆಗೆ.”

“ಬದುಕಿನ ಪ್ರತಿ ಹೆಜ್ಜೆಯಲ್ಲೂ ನಿನ್ನ ಹಿಂಬಾಲಿಸುವ ಆಸೆ,.. ನೋವಲ್ಲೂ… ನಲಿವಲ್ಲೂ, ಸಾವಲ್ಲೂ.”

“ನನ್ನ ಪ್ರಪಂಚನೇ ನೀನಾಗಿರುವಾಗ ನಿನ್ನ ಬಿಟ್ಟು ಬದುಕೋಮಾತೆ ಇಲ್ಲ… ನಿನ್ ಮೇಲೆ ಕೋಪ ಮಾಡ್ಕೊಳೊ ಜೀವನು ನಾನೆ,,, ನಿನ್ನ ಪ್ರಿತ್ಸೋ ಜೀವನು ನಾನೆ.”

“ಮಾತು ಮಾತಿಗೂ ಹೆಚ್ಚುತ್ತಿದೆ ಪ್ರೀತಿ, ಮಾತು ಮುಗಿದರೂ ಉಕ್ಕುತ್ತಿದೆ ಒಲವು ಮಳೆಯ ರೀತಿ , ನಿನ್ನ ಕಂಡ ಬಳಿಕ ಎಲ್ಲವೂ ಶೂನ್ಯ ನನಗೆ , ನೀ ಹತ್ತಿರ ಇದ್ದರೆ ಆ ಬದುಕೇ ಧನ್ಯ ನನಗೆ.”

“ಗೆಳತಿ ಹೊಸ ಕವಿತೆಯ ಮೊದಲ ಸಾಲು ಬರೆಯೋದು ಹೇಗೆ ಹೇಳು. ಹೆಸರಿಡಲು ಮರೆತೋದ ಕವಿತೆಗೆ ನೀನೆ ಒಂದು ಹೆಸರು ಹೇಳು. ಹಟ ಮಾಡದೆ ನನಗೆ ಕೆಲವು ಪದಗಳಾದರು ಕೊಟ್ಟು ಹೋಗು, ಈ ಹೃದಯದಲ್ಲಿ ನಿನ್ನ ಬಿಟ್ಟರೆ ಬೇರಾರಿಲ್ಲ. ನಿನ್ನ ಕವಿತೆಗೆ ನೀನೆ ಒಂದು ಹೆಸರಿಟ್ಟು ಹೋಗು.”

“ಸ್ವರ್ಗ ಎಲ್ಲೋ ಇರುತ್ತೆ ಅಂತ ಎಲ್ಲರೂ ಹೇಳ್ತಾರೆ.. ಆದರೆ,, ನಿಜ ಹೇಳ್ಬೇಕು ಅಂದ್ರೆ, ನಮ್ಮನ್ನ ಪ್ರೀತಿಸಿದವರು ನಮ್ಮ ಜೊತೆ ಇದ್ರೆ ಅದಕ್ಕಿಂತ ಮಿಗಿಲಾದ ಸ್ವರ್ಗ,, ಮತ್ತೊಂದ್ ಇಲ್ಲ”
Jeevana Life Quotes in Kannada

“ಒಂದು ಹೆಣ್ಣಿನ ಜೀವನ ಬಂಗಾರವಾಗಬೇಕಾದರೆ, ಕೈಹಿಡಿದವನು ಬಂಗಾರದಂತ ಪ್ರೀತಿ ತೋಠಿಸಬೇಕು. ಕೆಜಿಗಟ್ಟಲೇ ಬಂಗಾರವನ್ನು ತಂದು ಕೊಟ್ಟರು ಹೆಣ್ಣು ಒಲಿಯುವುದಿಲ್ಲ . ಬಂಗಾರದಂತ ಪ್ರೀತಿ ತೋರಿದರೆ ಒಲಿಯದ ಹೆಣ್ಣೀ ಇಲ್ಲ..?”

“ಗಾಯಗೊಳ್ಳದ ಮನಸು, ಕಣ್ಣೀರು ಹಾಕದೇ ಇರುವ ಮನುಷ್ಯ ಇಲ್ಲವೇ ಇಲ್ಲ ಈ ಜಗತ್ತಿನಲ್ಲಿ, ಆದರೆ, ಆ ಗಾಯಗಳನ್ನು ಮರಿಸುವ ಒಂದು ಮನಸು, ಕಣ್ಣೀರನ್ನ ಒರೆಸುವ ಒಂದು ಜೀವ ಜೊತೆ ಇದ್ರೆ,… ಪ್ರತಿ ಗಾಯವು ಒಂದು ಅನುಭವವೇ, ಪ್ರತಿಯೊಂದು ಕಣ್ಣೀರ ಹನಿಯೂ ಆನಂದಬಾಷ್ಪವೇ ಸರಿ.”

“ಚಿಕ್ಕ ಮಗುವಿನಂತೆ ಹಠ ಹಿಡಿದಿದೆ ನನ್ನ ಹೃದಯ.. ಅದಕ್ಕೆ ಬೇಕಂತೆ ನಿನ್ನದೇ ಹೃದಯ.”

“ಮುದ್ದಾಗಿರೋ ನೂರು ಹುಡುಗಠಿಗಿಂತ ಮುದ್ದು ಮಾಡೋ ನನ್ನ ಹುಡಗ ನನ್ನ ಜೊತೆ ಇದ್ದರೆ ಸಾಕು.”

“ದಿನ ಒಬ್ಬರನೊಬ್ಬರು ನೋಡ್ಬೇಕು ಮುದ್ದಾಡ್ಬೇಕು ಅನ್ನೋದು ಮಾತ್ರ ಪ್ರೀತಿ ಅಲ್ಲ,,,,ಎಷ್ಟೇ ದೂರ ಇದ್ರು ಪ್ರತಿ ಕ್ಷಣ ಅವರನ್ನ ನೆನಪುಮಾಡ್ತಾ ಪ್ರೀಪ್ರೀತಿಸ್ತಾರಲ್ಲಾ, ಅವರು ನಿಜವಾದ ಪ್ರೇಮಿಗಳು.”

“ನನ್ನೆಲ್ಲ ಮೌನಕ್ಕೂ ಮಾತು ಕಲಿಸಿದವಳು ನೀನು. ನನ್ನ ಮುದ್ದು ಪ್ರೀತಿಗೆ ಮೌನಿಯೆಂದು ಹೆಸರಿಟ್ಟವಳು.”

“ಒಂದು ಹೆಜ್ಜೆ ನೀ ಮುಂದೆ
ಮತ್ತೊಂದು ಹೆಜ್ಜೆ ನಾ ಮುಂದೆ, ನಡೆಯೋಣ ಹೀಗೆ ಜೊತೆಯಾಗಿ ಇಬ್ಬರು, ನೋವು ನಲಿವುಗಳು ಇರಲಿ ಇಬ್ಬರಿಗೂ ಸಮನಾಗಿ, ಈ ಜೀವನ ಮೀಸಲು ನಿನ್ನ ಖುಷಿಗಾಗಿ.”

“ಕಣ್ಣಿಂದ ನೋಡಿ : ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ.”

“ಮನಸ್ಸು ದೊಡ್ಡದು ಯಾಕೆಂದರೆ, ಅದು ಎಲ್ಲರಿಗೂ ಜಾಗ ಕೊಡುತ್ತದೆ. ಆದರೆ ಹೃದಯ ಚಿಕ್ಕದು ಯಾಕೆಂದರೆ ಅದು ಒಬ್ಬರಿಗೆ ಮಾತ್ರ ಮೀಸಲು.”

“ನನ್ನದೊಂದೆ ಚಡಪಡಿಕೆ. ನಿನ್ನ ಮಡಿಲಲ್ಲೊಮ್ಮೆ ತಲೆಯಿಟ್ಟು, ನಮ್ಮಿಬ್ಬರ ಅಹಂ ಬಿಟ್ಟು, – ನೆಮ್ಮದಿಯ ನಾಲ್ಕು ಕ್ಷಣಗಳನ್ನೂ ನಮಗಾಗಿ ಮೀಸಲಿಡಬೇಕೆಂದು.”

“ಬದುಕಿನ ಪ್ರತಿ ಹೆಜ್ಜೆಯಲ್ಲೂ ನಿನ್ನ ಹಿಂಬಾಲಿಸುವ ಆಸೆ,. ನೋವೆಲ್ಲೂ… ನಲಿವಲ್ಲೂ… ಸಾವಲ್ಲೂ”

“ಈ ಜನ್ಮಕ್ಕೆ ನನಗಿರೋದು . ಒಂದೇ ಒಂದು ಆಸೆ, ಅದು ಏನು ಅಂದ್ರೆ? ನಾನು ನಿನ್ ಜೊತೆ ಕಂಡಂತಹ ಕನಸುಗಳೆಲ್ಲಾ ನಿಜ ಆಗಬೇಕು ವೆ ಅಷ್ಟೇ.”

“ಒಳ್ಳೆ ಗಂಡ ಅಂದರೆ ಮನೆ ಒಳಗೆ ಚಿನ್ನ, ರನ್ನ ಅನ್ನೋನಲ್ಲ.. ಪ್ರಪಂಚದ ಎದುರಿಗೆ ಸಹ ಅವಳಿಗೆ ಗೌರವ ಸಿಗಲಿ ಅಂತ ಬಯಸುವವನು.”

“ಸ್ವರ್ಗ ಎಲ್ಲೋ ಇರುತ್ತೆ ಅಂತ ಎಲ್ಲರೂ ಹೇಳ್ತಾರೆ ಆದರೆ ನಿಜ ಹೇಳ್ಬೇಕು ಅಂದ್ರೆ ನಮ್ಮನ್ನ ಪ್ರೀತಿಸಿದವರು ನಮ್ಮ ಜೊತೆ ಇದ್ರೆ ಅದಕ್ಕಿಂತ ಮಿಗಿಲಾದ ಸ್ವರ್ಗ ಮತ್ತೊಂದ ಇಲ್ಲ.”

“ನಾನು ನಿನಗೆ ಸರಿಯಾಗಿ ಫೋನ್ ಮಾಡಿ ಚನ್ನಾಗಿ ಇದ್ದೀಯ ಅಂತ ಯಾವತ್ತೂ ಕೇಳಿಲ್ಲ, ಆದ್ರೆ ನಾನು ಯಾವಾಗೂ ನೀನು ಚನ್ನಾಗಿ ಇರಲಿ ಅಂತ ಬಯಸುತ್ತಿನಿ, ನಿನಗೆ ಸಯಾಗಿ msg ಮಾಡಲ್ಲ, ಆದ್ರೆ ನನ್ನ ಮನಸ್ಸು ಯಾವಾಗಲೂ ನಿನ್ನ ಬಗ್ಗೆನೇ ಯೋಚನೆ ಮಾಡುತ್ತೆ, ನಾನು ನಿನ್ನ meet ಆಗಿಲ್ಲ ಆದ್ರೆ ನಾನು ನಿನ್ನ ದಿನ ತುಂಬಾ “Miss ಮಾಡ್ಕೊಂತಿನಿ, ನಾನು ನಿನ್ನ ಪ್ರೀತಿ ಮಾಡ್ತೀನಿ ಅಂತ ಯಾವತ್ತೂ ಹೇಳಿಲ್ಲ, ಆದ್ರೆ ನಾನು ನೀನು ಯಾವಾಗಲೂ ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತೀನಿ.”
Friendship Quotes in Kannada

“ಪ್ರೀತಿಯಲ್ಲಿಎಷ್ಟೇ ಜಗಳ ಬಂದ್ರು ಮಾತು ಇಂದ ದೂರ ಇರಬಹುದು ಆದ್ರೆ ಮನಸ್ಲಿಂದ ಯಾವತ್ತೂ ದೂರ ಹಗೋಕೆ ಸಾಧ್ಯ ಇಲ್ಲ.”

“ಒಬ್ಬ ನಿಜವಾದ ಗಂಡನ ಬೆಲೆ ಗೊತ್ತಾಗುವುದು ತನ್ನ ಹೆಂಡತಿಯ ಹೆರಿಗೆಯ ನೋವಲ್ಲಿ ಜೊತೆ ಇದ್ದು ನಾನಿದ್ದೀನಿ ಎನು ಆಗೋಲ್ಲ `ಹೆದರಬೇಡ ಎಂದು… ಧೈರ್ಯ ತುಂಬುವಾಗ.”

“ದೇಹ ಬಯಸಿದ ಸುಖವಲ್ಲ ಪ್ರೀತಿ ಅಂದ್ರೆ,,, ಮನಸ್ಸು ತಪಸ್ಸು ಮಾಡಿ ಪಡೆದಿರುವ ದೊಡ್ಡ ವರ,,,, ಪ್ರೀತಿ ಅಂದ್ರೆ ಮನಸಲ್ಲಿ ಜನ್ಮತಾಳಿದ ಈ ಪ್ರೀತಿ ದೇಹ ಮಣ್ಣಲ್ಲಿ ಸೇರೋವರೆಗೂ ಹಾಗೆ ಇರುತ್ತೆ.”

“ನಂಬಿಕೆಗೆ ಮತ್ತೊಂದು ಹೆಸರೇ ನಿನ್ನದು… ನಿನ್ನ ಹೃದಯ ಎಂದಿಗೂ ನನ್ನದು. ನಿನ್ನ ಎಷ್ಟು ಪ್ರೀತಿಸಿದರೂ ಸಾಲದು. ನೀ ಜೊತೆಯಾಗಿದ್ದರೆ ಇಡೀ ಜಗತ್ತೇ ಕಾಣದು.”

“ನಿವು ಎಷ್ಟೇ Busy ಇದ್ರೂ ನಿಮಗೋಸ್ಕರ ನಿಮ್ಮನ್ನ ಇಷ್ಟಪಡೋ ಒಂದು ಜೀವ ಕಾಯ್ತಾ ಇರತ್ತೆ ಎಂಬುದು ನೆನಪಿರಲಿ.”

“ಈ ಹೃದಯದ ತುಂಬಾ ನೀನೇ ತುಂಬಿರುವಾಗ, ನಗು ಬಂದರು ಅಳು ಬಂದರು ಅದು ನಿನ್ನಿಂದ , ನಿನಾಗಾಗಿ ಮಾತ್ರ ಈ “ಪೆದ್ದು ಹೃದಯದ “ಮುದ್ದು” ಸೂತ್ರದಾರ ನೀನೆ.”

“ನೂರು ಊರು ಸುತ್ತಿದರೂ ನೂರು ದಾನ ಮಾಡಿದರೂ ಸಿಗಲಿಲ್ಲ ಪುಣ್ಯ – ನಿನ್ನಕೈಹಿಡಿದಮಾತ್ರಕೆ ಇದು ನಾನಾಗುವೆ ಧನ್ಯ, ಕನಕ ಪುರಂದರ ಹಾಡಿದರೂ ರವಿವರ್ಮನ ಕಲೆ ಮೆರೆದರೂ ಸವಿಯಲಾಗಲಿಲ್ಲ ಸವಿಯ, – ನಿನ್ನ ಕಂಡಮಾತ್ರಕೆ ಹರಿವುದು ಪ್ರೇಮಕಾವ್ಯ.”

“ನನ್ನ ನಿನ್ನ ಅಂತರ ತುಂಬಾ ದೂರ ಇರಬಹುದು. ಆದರೆ ನನ್ನ ಗುಂಡಿಗೆಯ ಪ್ರತಿ ಬಡಿತದಲ್ಲೂ ನಿನ್ನ ನೆನಪು ‘ಮಿಡಿಯುತ್ತಿರುವುದು.”

“ಜೀವನದಲ್ಲಿ ನಮಗೋಸ್ಕರ ಕಾಯ್ತಾ ಇರೋವರಿಗೆ,,, ನಾವು ಸಿಗದೆ ಇರಬಹುದು ಆದ್ರೆ, ನಮ್ಮನ್ನೇ ನಂಬಿಕೊಂಡಿರುವವರನ್ನು ಮಾತ್ರ ನಾವು, ಯಾವತ್ತೂ ಕೈಬಿಡಬಾರದು ಯಾಕಂದ್ರೆ,,, ನೀವು ಬೇಕು ಅನ್ನುವ ಈ ಜಗತ್ತಿನಲ್ಲಿ ನೀನೇ ಬೇಕು ಅನ್ನೋವರು ಬಹಳ ಅಪರೂಪ.”

“ಗಂಡು ಎಷ್ಟೇ ಪ್ರೀತಿಸಿದರೂ ನೋಯಿಸದೆ ಇರಲಾರ..!! ಹೆಣ್ಣು ಎಷ್ಟೇ ನೋಯಿಸಿದರೂ ಪ್ರೀತಿಸದೆ ಇರಲಾರಳು.”

“ನೀನಂದ್ರೆ ನನಗಿಷ್ಟ ಈ ಪ್ರಪಂಚವನ್ನ ಮರೆಯುವಷ್ಟು ನೀನಂದ್ರೆ ನನಗೆ ಪ್ರೀತಿ ಎಷ್ಟೆಂದ್ರೆ? ಈ ನನ್ನ ಪ್ರಾಣವನ್ನು ಬಿಡುವಷ್ಟು,”

“ನಾನು ನೀನಾಗಿ, ನೀನು ನಾನಾದರೆ ಎಷ್ಟು ಚೆನ್ನ,,, ನಾನು ನಿನ್ನನಂತೆ ನೀನು ನನ್ನಂತಾದರೆ ಎಷ್ಟುಚೆನ್ನ.”

“ಅಮ್ಮನ ಪ್ರೀತಿ, ಹುಡುಗಿ ಪ್ರೀತಿ, ಎರಡೂ ಒಂದಲ್ಲ ಅಂತ ಹೇಳ್ತಾರೆ BUT.. ನಿಜವಾಗಿ,ಮನಸಾರೆ,, ಪ್ರೀತಿಸೋ ಹುಡುಗಿ ಪ್ರೀತಿ ಅಮ್ಮನ ಪ್ರೀತಿಗೆ ಸಮವಾಗಿರುತ್ತೇ.”

“ಕಣ್ಣಲಿ ಕಣ್ಣಿಡು ಗೆಳತಿ, ಕೊಡುವೆನು ನನ್ನ ಹೃದಯವ ನಿನಗಾಗಿ,, ಕಯ್ಯಲಿ ಕಯ್ಯಿಡು ಗೆಳತಿ, ಜೊತಿ ನಡೆವೆನು ಬಾಳ ಸಂಗತಿಯಾಗಿ,, ಮನಸಿನಲಿ ಮನಸನಿಡು ಗೆಳತಿ ಮನಸಾರೆ ಸೋಲುವೆ ನಿನ್ನೆಡೆಗೆ ಮಗುವಾಗಿ,, ನೀನಿರುವಾಗ ಜೊತೆಯಾಗಿ , ಈ ಬಾಳು ಸಾಗುವುದು ಹಾಯಾಗಿ.”
Kannada Sad Quotes

“ಕಾಗೆ ಬಣ್ಣ ಕಪ್ಪು ಆದರೂ ಅದಕ್ಕೆ ಹಂಚಿ ತಿನ್ನುವ ಗುಣವಿದೆ. ಬದುಕೋದಕ್ಕೆ ಬೇಕಾಗಿರೋದು ಬಣ್ಣ ಮುಖ್ಯ ಅಲ್ಲ… ಬಣ್ಣ ಬದಲಾಯಿಸದೇ ಇರುವ “ಗುಣ” ಮುಖ್ಯ.”

“ಬೇರೆಯವರಿಗೆ ನಾವು ಕೆಟ್ಟವರಾಗಿ ಕಂಡರೂ ಪರವಾಗಿಲ್ಲ… ನಮಗೆ ನಾವು ಒಳ್ಳೆಯವರಾದರೆ ಸಾಕು ಜೀವನ ನಮ್ಮದು ಅವರದಲ್ಲ…?”

“ಜವಾಬ್ದಾರಿಗಳು ಹೆಚ್ಚಾದಂತೆ ನಮ್ಮ ಕನಸುಗಳು ತಾನಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತವೆ.”

“ಇವತ್ತು ಇರೋ ಪ್ರೀತಿನಾ ಉಳಿಸಿಕೋ… ಯಾರಿಗೆ ಗೊತ್ತು ನಾಳೆ ನಾನು ಇರ್ತಿನೋ ಇರಲ್ಲೋ ಅಂತ ಗೊತ್ತಿಲ್ಲ.”

“ನನಗಿಂತ ಹೆಚ್ಚಾಗಿ ನಿನ್ನನ್ನು ಯಾರು ಪ್ರೀತಿಸುವದಿಲ್ಲ ಅಂತ ನಾನು ಹೇಳಲ್ಲ ಆದ್ರೆ ನನ್ನ ಹಾಗೇ ಪ್ರತಿ ಕ್ಷಣ ನಿನ್ನ ಬಗ್ಗೆ ಯೋಚಿಸೋರು ಯಾರು ಸಿಗಲ್ಲ.”

“ನಾನು ನಿನ್ನ ಎಷ್ಟು ಪ್ರೀತಿ ಮಾಡ್ತಾ ಇದ್ದಿನೋ ನೀನು ನಂಗೆ ಅಷ್ಟೇ ನೋವು ಕೊಡ್ತಾ ಇದ್ದೀಯಾ.”

“ಬದುಕೆಂಬ ನಾಟಕದಲ್ಲಿ ಸುಖಗಿಂತ ನೋವಿನ ನಟನೆ ಜಾಸ್ತಿ ಇದೆ.”

“ಕಳೆದುಕೊಳ್ಳಲು ಮನಸ್ಸಿಲ್ಲ… ಪಡೆದುಕೊಳ್ಳಲು ಭಾಗ್ಯವೂ ಇಲ್ಲ…. ಭಗವಂತ ನಿನಗೆ ನನ್ನ ಕ್ಷಮೆಯೂ ಇಲ್ಲ.”

“ಕಣ್ಣುಗಳಲಿ ಆಸೆ ಇದೆ ನೂರಾರು… ಮನಸಿನ ಬಯಕೆಗಳು ಸಾವಿರಾರು… ಕಾಯುತ್ತಿದೆ ನನ್ನ ಮನಸು ನಿನ್ನ ಜೊತೆ ತುಂಬಾ ಮಾತಾಡಲು… ನೀನು ಹೇಳು ಯಾವಾಗ ಬರುವೇ ನನ್ನನ್ನು ನೋಡಲು.”

“ನನ್ನಲ್ಲಿ ನಾಳೆ ಕಾಣೋ ಕನಸುಗಳಿಗಿಂತ ನಿನ್ನೆ ನಡೆದ ಘಟನೆಯ ನೆನಪುಗಳೇ ಹೆಚ್ಚಾಗಿದೆ.”

“ಕೆಲವರು ಬದುಕು ಬೇಡವೆಂದು ಸತ್ತರೆ ಇನ್ನೂ ಕೆಲವರು ಬದುಕಲೇಬೇಕು ಎಂದು ದಿನಾ ಸತ್ತು ಸತ್ತು ಬದುಕುತ್ತಾರೆ.”

“ನಿಯತ್ತಾಗಿ ಪ್ರೀತಿ ಮಾಡೋರಿಗೆ ಈ ಕಾಲದಲ್ಲಿ ಯಾರು ಬೆಲೆ ಕೊಡಲ್ಲ ಬರೀ ನೋವು, ಕಣ್ಣೀರು, ಅವಮಾನ ಅವರ ನಾಟಕದ ಪ್ರೀತಿಗೆ ನಮ್ಮ ಜೀವನ ಬಲಿಯಾಗುತ್ತೆ.”

“ನನ್ನ ಬಯಸಿದವರಿಗೆ ನಾನು ಸಿಗದೇ ಇರಬಹುದು… ಆದರೆ ನನ್ನ ನಂಬಿದವರಿಗೆ ನಾನು ಯಾವತ್ತೂ ಮೋಸ ಮಾಡಿಲ್ಲ.”

“ಯಾರಿಲ್ಲದ ನನ್ನ ಬದುಕಲ್ಲಿ ನನಗಾಗಿ ನೀನು ಬಂದೆ ಪ್ರೀತಿ ನೋವು ನಲಿವು ಎಲ್ಲದಕ್ಕೂ ನೀ ಜೊತೆಯಾದೆ ಸಂಪತ್ತಿನ ಅಹಂ ನಿನಗೆ ಇದ್ದರೆ ಪ್ರೀತಿಯ ಹಿರಿಮೆ ನಿನಗಿಂತ ಹೆಚ್ಚಿದೆ ಸಂಪತ್ತಿನಲಿ ನಾನು ಬಡವನಾದರೆ ಪ್ರೀತಿಯಲಿ ನಾನು ಯಾವತ್ತಿಗೂ ಸಾಹುಕಾರ ಕಣೇ.”

“ನಿನ್ನ ಒಳ್ಳೆಯತನ ದುರುಪಯೋಗ ಮಾಡಿಕೊಳ್ಳುವವರಿಗೆ ನೀನು ಕೆಟ್ಟವನಾಗಿಯೇ ಇದ್ದು ಬಿಡು ಏಕೆಂದರೆ ಇದು ಸ್ವಾರ್ಥಿಗಳ ಪ್ರಪಂಚ.”
Positive Motivational Quotes in Kannada

“ದುಃಖ ಯಾರಿಗೆ ಇಲ್ಲ ಹೇಳಿ ಆಗೋದೆಲ್ಲ ಒಳ್ಳೆಯದಕ್ಕೆ ನಗ್ತಾ ಇರು ಯಾವಾಗಲೂ.. ಬೆವರಹನಿ ಭರವಸೆ ಕೊಡುತ್ತೆ ಕಣ್ಣೀರಹನಿ ಬದುಕು ಕಲಿಸುತ್ತೆ ಪ್ರತಿ ನೋವು ಒಂದು ಪಾಠ ಕಲಿಸುತ್ತೆ ಪ್ರತಿ ಪಾಠ ವ್ಯಕ್ತಿಯನ್ನ ಬದಲಿಸುತ್ತೆ.”

“ನನಗೆ ಅಂತ ಒಂದು ಪ್ರೀತಿಸೋ ಜೀವ ಇದೆ ನನಗೆ ಖುಷಿ ಆದರೂ ಬೇಜಾರ ಆದರೂ ಮೊದಲು ನೆನಪಾಗೋದು ಅವಳೇ… ಯಾಕೆ ಗೊತ್ತಾ ನನಗೆ ಆ ಜೀವನೇ ಒಂದು ಪ್ರಪಂಚ ಲವ್ ಯೂ ಚಿನ್ನಿ.”

“ಜೀವನದಲ್ಲಿ ಬೇಗ ಮೇಲೆ ಬರಬೇಕು ಅಂತ ದಿನಕ್ಕೊಂದು ಬಣ್ಣದ ಮುಖವಾಡ ಹಾಕವನು ನಾನಲ್ಲ ಮುಟ್ಟೋ ಗುರಿ ತಡವಾದರು ಇಡೋ ಹೆಜ್ಜೆ ನಿಯತ್ತಾಗಿರುತ್ತೆ.”

“ಕಾಯೋದರಲ್ಲಿ ಒಂದು ಅರ್ಥ ಇದೆ. ಆದ್ರೆ ಪ್ರತಿ ಸಾರಿನೂ ನಿರಾಶೆ ಆದಾಗ ಅಲ್ಲಿ ನಂಬಿಕೆಗಳು ಸಾಯುತ್ತವೆ. ಮನಸಿಗೆ ಮನಸೇ ಭಾರವಾಗಿ ನಂಬಿಕೆಗಳು ಸಾಯುವಾಗ ನೆನಪುಗಳೇ ನೀ ಮಾತ್ರ ಏಕೆ ನನ್ನ ಕಾಡುವೆ.”

“ಜೀವನದಲ್ಲಿ ತಪ್ಪು ಮಾಡಿ ಪರವಾಗಿಲ್ಲ… ಆದರೆ… ನಂಬಿಕೆ ದ್ರೋಹ ಯಾವತ್ತೂ ಮಾಡಬೇಡಿ.”

“ಹೆಣ್ಣನ್ನು ಅಳಿಸೋರು ಇದಾರೆ ಹೆಣ್ಣಿಗಾಗಿ ಅಳುವವರು ಇದ್ದಾರೆ ಅಳಿಸುವವರಿಗೆ ಸುಖ ಬೇಕು ಅಳುವವರಿಗೆ ಪ್ರೀತಿ ಬೇಕು.”

“ನೋವು ಪಡೆಯದೆ ಬುದ್ದಿ ಕಲಿಯಲು ಸಾಧ್ಯವಿಲ್ಲ…. ಬಿಟ್ಟು ಹೋದವರನ್ನ ನೆನೆಪಿಸಿಕೊಳ್ಳಲು ನನಗೆ ಇಷ್ಟವಿಲ್ಲ.”

“ವಾದ ಮಾಡೋ ಜನಗಳ ಜೊತೆಗಿನ ಒಡನಾಟಕ್ಕಿಂತ ಒಳ್ಳೆಯವರ ಜೊತೆಗಿನ ಹೊಂದಾಣಿಕೆನೆ ಚೆಂದ. ಆರ್ಥವಿರದ ಮಾತುಗಳಿಗಿಂತ,, ಅರ್ಥಪೂರ್ಣ ಮೌನವೇ ಚೆಂದ.”

“ನನಗೆ ಸಾವು ಬಂದರೂ ನಾನು ನಗು ನಗುತ್ತಾ ಸಾಯುವೆ ಯಾಕಂದ್ರೆ.. ಈ ಜನ್ಮದಲ್ಲಿ ಸಾಕಷ್ಟು ನೋವು ಅನುಭವಿಸಿದಿನಿ ಬರೀ ನೋವಲ್ಲೇ ಬಂದಿದೀನಿ ಕೂಡ… ಇನ್ನೊಂದು ಜನ್ಮ ಅಂತ ಇದ್ದರೆ ಒಂದು ಮರವಾಗಿ ಹುಟ್ಟೋಕೆ ಇಷ್ಟಪಡ್ತೀನಿ.”

“ನಾನೇನು ಸ್ವಾರ್ಥಿಯಲ್ಲ,, ನಾನೇ ಹೆಚ್ಚು ಅನ್ನುವ,, ಜಂಭ ಕೂಡ ನನಗಿಲ್ಲ ನನಗೆ ಅವಶ್ಯಕತೆ ಇರದ ಜನರಿಂದ ನಾನು ಸ್ವಲ್ಪ ದೂರ ಇದಿನಿ ಅಷ್ಟೇ.”

“ಅಂದು ನೀನೆಂದರೆ…. ನೀನೆ ನನ್ನ ಜೀವ ನೀನೆ ನನ್ನ ಪ್ರಪಂಚ,, ನೀನು ನನಗೆ ಬೇಕು ಅನ್ನೋ ಬಾಯಲ್ಲಿ ಇಂದು ನೀನೆಂದರೆ…. ನೀನು ಅಂದ್ರೆ ನನಗೆ ಅಸೂಯೆ, ದೊಡ್ಡ ಹಿಂಸೆ ತಲೆ ತಿನ್ನಬೇಡ ಅನ್ನೋ,, ಮಾತು ಕೇಳೊ ಪರಿಸ್ಥಿತಿ ಬಂದಿದೆ…! ಪ್ರೀತಿ ಮಾಡೋದು ತಪ್ಪಾ…? ಅಥವಾ ಅತಿಯಾಗಿ ಪ್ರೀತಿಸೋದು ತಪ್ಪಾ.”

“ನೀನು ಎಷ್ಟೇ ಒಳ್ಳೆಯವನಾಗಿ ಇರು ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿ ಇದ್ದೇ ಇರುತ್ತಾನೆ.”

“ಬದುಕುವ ವಯಸ್ಸಿದೆ – ಆದರೆ ಯಾಕೋ ಗೊತ್ತಿಲ್ಲ ಸಾಯೋ ಆಸೆ ಅಗ್ತಿದೆ.”

“ಎಷ್ಟು ಕೋಟಿ ಹಣ ಇದ್ದರೇನು…? ದೇವರು ಕೊಟ್ಟಿರೋ ಆಯಸ್ಸು ಮೀರಿ ಒಂದು ಕ್ಷಣ ಹೆಚ್ಚಿಗೆ ಬದುಕೋಕೆ ಆಗಲ್ಲಾ.”

“ನಮ್ಮ ದೇಹದಲ್ಲಿ ರಕ್ತ ಹೆಚ್ಚಾದಂತೆ ರಕ್ತ ಸಂಬಂಧಿಗಳು ಹೆಚ್ಚಾಗುವುದಿಲ್ಲ… ಆದರೆ ರೊಕ್ಕ ಹೆಚ್ಚಾದಂತೆ ರೊಕ್ಕ ಸಂಬಂಧಿಗಳು ಸಾವಿರಾರು ಜನ ಸುತ್ತುವರೆಯುತ್ತಾರೆ.”
Feeling Quotes in Kannada

” ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ.”

“ಸಹಾಯ ಮಾಡಿದವರ ಮರೆಯಬೇಡಿ. ಪ್ರೀತಿಸಿದವರ ದ್ವೇಷಿಸಬೇಡಿ. ನಂಬಿದವರಿಗೆ ಮೋಸ ಮಾಡಬೇಡಿ. ಇದುವೇ ಬದುಕಿನ ಸರಳ ಸೂತ್ರ.”

“ಕಿತ್ತುಕೊಂಡು ತಿನ್ನುವವರ ಹೊಟ್ಟೆ ಎಂದಿಗೂ ತುಂಬುವುದಿಲ್ಲ, ಹಂಚಿಕೊಂಡು ತಿನ್ನುವವರು ಎಂದಿಗೂ ಉಪವಾಸ ಮಲಗುವುದಿಲ್ಲ.”

“ಕ್ಷಮೆ” ಎನ್ನುವ ಎರಡಕ್ಷರ ಎಂತಹ ಪರಿಸ್ಥಿತಿಯನ್ನು ತಿಳಿಗೊಳಿಸಬಹುದು.”

“ತೆನೆ ಬಿಟ್ಟ ಪೈರು ಬಾಗುತ್ತದೆ. ಗೊನೆ ಬಿಟ್ಟ ಬಾಳೆಯೂ ಬಾಗುತ್ತದೆ. ಫಲ ಬಿಟ್ಟ ಗಿಡವೂ ಬಾಗುತ್ತದೆ. ಜಗತ್ತಿಗೆ ಏನೂ ಕೊಡದ ಜಂಭದ ಈ ಜೀವ ಬೀಗುತ್ತದೆ. ಬೀಗುವುದು ಸದ್ಗುಣವಲ್ಲ ಬಾಗುವುದೇ ಒಂದು ಸದ್ಗುಣ.”

“ಬೇರೆಯವರಿಂದ ಸದಾ ಸಿಹಿಯನ್ನೆ ಬಯಸುವ ನಾವು ಬೇರೆಯವರಿಗೂ ಸಿಹಿಯನ್ನೆ ತಾನೆ ಕೊಡಬೇಕು, ಸಿಹಿಯನ್ನು ಪಡೆದು ಕಹಿಯನ್ನು ನೀಡುವುದು ಯಾವ ನ್ಯಾಯ.”

“ಮಣ್ಣಲ್ಲಿ ಮಣ್ಣಾಗುವ ವ್ಯಕ್ತಿಯ ದೇಹಕ್ಕೆ ಸಾವು ಖಚಿತ. ಆದರೆ ಮನದಲ್ಲಿ ಉಳಿಯುವ ವ್ಯಕ್ತಿಯ ವ್ಯಕ್ತಿತ್ವವು ಸದಾ ಶಾಶ್ವತ.”

“ಜೀವನದಲ್ಲಿ ಆಸೆಯ ಬುತ್ತಿ ಎಂದಿಗೂ ಚಿಕ್ಕದಿರಬೇಕು.”

“ಸಹಾಯ ” ಎಂಬುವುದು ಬಹು ಅಮೂಲ್ಯವಾದ “ಉಡುಗೊರೆ” ಆದುದರಿಂದ ಅದನ್ನು ಎಲ್ಲರಿಂದಲು ಅಪೇಕ್ಷಿಸ ಬೇಡ ಯಾಕೆಂದರೆ ಕೆಲವರು ಮಾತ್ರ ಹೃದಯದಿಂದ “ಶ್ರೀಮಂತ” ರಾಗಿರುತ್ತಾರೆ.”

“ಯಾರು ನಿಮ್ಮ ಮಾತಿಗೆ ಗೌರವ ಕೊಡುವುದಿಲ್ಲವೋ ಅವರಿಗೆ ಮೌನವೇ ಸೂಕ್ತವಾದ ಉತ್ತರ.”

“ಮೌನ” ಜಗತ್ತಿನ ಅತಿ ಸುಂದರವಾದ ಮಾತು.”

“ನಮ್ಮವರೊಬ್ಬರು ದೂರ ಹೋದಾಗ ಆಗೋ ನೋವಿಗಿಂತ, ನಮ್ಮರೊಬ್ಬರು ಹತ್ತಿರವಿದ್ದು ದೂರ ದೂರ ಇರಲಾರಂಬಿಸಿದಾಗ ತುಂಬಾ ತುಂಬಾ ನೋವಾಗುತ್ತೆ.”

“ಇನ್ನೊಂದು ಮನೆಯ ಹೆಣ್ಮವಳು; ನಿಂದಿಸದಿರು, ನೋಯಿಸದಿರು, ಮತ್ತೊಂದು ಮನೆಯ ಬೆಳಕವಳು.”

“ಅಹಂಕಾರ ಮನುಷ್ಯ ಮಾಡಿಕೊಳ್ಳುವ ಕೆಟ್ಟ ಅಲಂಕಾರ.”

“ಸಂತೋಷದಲ್ಲಿರುವವನಿಗೆ ಹಾಡಿನ ಸಂಗೀತ ಇಷ್ಟವಾಗಬಹುದು. ಆದರೆ , ಅದರಲ್ಲಿರುವ ಸಾಹಿತ್ಯ ಅರ್ಥವಾಗುವುದು ನೋವಿನಲ್ಲಿರುವವನಿಗೆ ಮಾತ್ರ.”
Good Morning Quotes in Kannada

“ಬದುಕಿನ ಅರ್ಥವೆಂದರೆ ಸಮಯ. ಬದುಕನ್ನು ಪ್ರೀತಿಸುವವರು ಸಮಯವನ್ನು ಆಲಸ್ಯದಿಂದ ಕಳೆಯಬಾರದು.”

“‘ನಾನು ಸಂತೋಷ ಬಯಸುತ್ತೇನೆ’ ಎಂಬುದರಲ್ಲಿ ನಾನೆಂಬ ಅಹಂಕಾರವನ್ನು ಬಯಕೆಯೆಂಬ ಆಸೆಯನ್ನು ತೊರೆದರೆ ಉಳಿಯುವದೇ ಸಂತೋಷ.”

“ಒಂದೊಂದು ಸಾರಿ ನಮ್ಮವರೇ ನಮಗೆ ಆಗುವುದಿಲ್ಲ ಎಂದು ಮೇಲೆ, ಬೇರೆಯವರು ಎಲ್ಲಿ ನಮಗೆ ಆಗುತ್ತಾರೆ.”

“ಖುಷಿಯಾಗಿರುವುದಕ್ಕೆ ಕಾರಣ ಬೇಕಿಲ್ಲ.”

“ನಮ್ಮ ಸ್ವಾರ್ಥವೇ ನಮ್ಮ ಅಳತೆಯ ಕೋಲು, ನಮ್ಮ ಸುಖ-ದು:ಖ, ಲಾಭ-ನಷ್ಟಗಳ ದೃಷ್ಟಿಯೇ ಬಳಸುವ ತೂಕದ ಕಲ್ಲುಗಳು ಇತರರು ನಮಗೆ ಒಳ್ಳೆಯವರಾಗಿ ಕಾಣಿಸುವುದು ಬಿಡುವುದು ಇವುಗಳಿಂದಲ್ಲವೇ?”

“ಸುಖ, ಸಂತೋಷದ ಮೂಲವೇ ಮನಸ್ಸಾಗಿದೇ.”

“ದೇಹದ ಮೇಲೆ ಬೀಳುವ ಪೆಟ್ಟಿಗಿಂತ, ನಂಬಿಕೆಯ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ.”

“ನಗುವುದು ಸಹಜ ಧರ್ಮ, ನಗಿಸುವುದು ಪರರ ಧರ್ಮ, ನಗಿಸಿ ನಗುತ ಬಾಳುವುದು ಅದವೇ ಮಾನವಧರ್ಮ.”

“ನಾವು ನೋಡುವ ದೃಷ್ಟಿ ಚೆನ್ನಾಗಿದ್ದಾರೆ ನಮಗೆ ಎಲ್ಲರೂ ಇಷ್ಟವಾಗುತ್ತಾರೆ. ನಾವಾಡುವ ಮಾತುಗಳು ಚೆನ್ನಾಗಿದ್ದರೆ ನಮ್ಮನ್ನು ಎಲ್ಲರೂ ಇಷ್ಟಪಡುತ್ತಾರೆ.”

“ಪೃಥ್ವಿಯ ಗುರುತ್ವಕ್ಕೆ ಮಾತ್ರ ನಮ್ಮನ್ನು ಕೆಳಗೆಯಲು ಸಾಧ್ಯ. ಬೇರಾರಿಗೂ ಆ ಅವಕಾಶವನ್ನು ನಾವು ನೀಡಲೇಬಾರದು.”

“ಜೀವನದಲ್ಲಿ ಎರಡು ರೀತಿಯ ನೋವುಗಳಿರುತ್ತವೆ. ಒಂದು ನಿಮ್ಮನ್ನು ನೋಯಿಸಿದರು ಇನ್ನೊಂದು ನಿಮ್ಮನ್ನು ಬದಲಾಯಿಸುತ್ತದೆ.”

“ಸುಂದರವಾದ ಉಡುಗೆ ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಆದರೆ ಸುಂದರವಾದ ಗುಣ ನಿಮ್ಮ ಬದುಕನ್ನೇ ಬದಲಿಸುತ್ತದೆ.”

“ನೆನಪುಗಳೇ ಹಾಗೆ, ನಾವು ದುಖಿಸಿದ ದಿನಗಳನ್ನು ನೆನೆದು ನಗುತ್ತೇವೆ. ನಕ್ಕ ದಿನಗಳನ್ನು ಮರೆತು ದುಃಖಿಸುತ್ತೇವೆ.”

“ಕನಸುಗಳಿಲ್ಲದೆ ಯಾವ ಗುರಿಯನ್ನೂ ತಲುಪಲಾಗದು; ಪ್ರೀತಿ ಇಲ್ಲದೆ ಯಾವುದನ್ನೂ ಅನುಭವಿಸಲಾಗದು.”
Kannada Feeling Quotes

“ಸಂಸ್ಕಾರದಿಂದ ಪ್ರಪಂಚವನ್ನು ಗೆಲ್ಲಬಹುದು,,,,ಆದರೆ ಅಹಂಕಾರದಿಂದ ಗೆದ್ದು ಕೂಡ ಸೋಲಬಹುದು.”

“ಯಾರಿಗಾದರೂ ಬೇಜಾರ್ ಮಾಡುವ ಮುನ್ನ ಒಮ್ಮೆ ಯೋಚಿಸಿ,,, ಅವರಿಗೂ ಒಂದು ಮನಸ್ಸು ಇರುತ್ತ ಅಂತಾ.”

“ನಾನಿದ್ದೀನಿ ಅನ್ನೋ ಒಂದು ಮಾತು ಸೋಲಿನಲ್ಲೂ ನಗಲು ಕಲಿಸುತ್ತೇ.”

“ಅಗತ್ಯ ವೇಳೆಯಲ್ಲಿ ಕೊಟ್ಟಿದ್ದು ಅಲ್ಪವಾದರು… ಅಮೂಲ್ಯನೇ.”

“ಕಾಯುವುದಕ್ಕೂ ಒಂದು ಅರ್ಥ ಇರುತ್ತೆ ಆದರೆ ಅದೇ ಕಾಯುವಿಕೆ ಪ್ರತಿ ಸಲನೂ ನಿರಾಸೆ ಆದರೆ,,,, ಇರುವ ನಂಬಿಕೆನು ಹೊರಟು ಹೋಗುತ್ತೆ.”

“ಕೆಲವರಿಗೆ ನಮ್ಮ ನೆನಪ ಆಗೋದು ಅವರಿಗೆ ಅಗತ್ಯ ಇದ್ದಾಗ ಮಾತ್ರ,, ಅವರ ಕೆಲಸ ಆದ ಮೇಲೆ ನಾವಾಗಿ ಮಾತಾಡಿದ್ರು ಅವರಿಗೆ ಮಾತಾಡೋಕೆ ಸಮಯ ಇರಲ್ಲ.”

“ನಿಮ್ಮನ್ನ ಪದೆ ಪದೆ ನೆನೆಸ್ಕೊತೀವಲ್ಲ ನಾವೇ ದಡ್ಡರು,,,,ನಮ್ಮ ನೆನಪೇ ಇಲ್ಲದೆ ಹಾಗೆ ಇರ್ತಿರಲ್ಲ,,, ನಿವೇ ಬುದ್ದಿವಂತರು.”

“ನನ್ನ ಇಷ್ಟಾ ಪಡೋ ಹೃದಯ ಯಾವ ಮೂಲೆಯಲ್ಲಿ ಪಾತ್ರೆ ತೋಳಿತಿದೆಯೊ ಯಾರಿಗಿ ಗೊತ್ತು.”

“ಬದುಕು ನಮ್ಮನ್ನು ಎಷ್ಟೇ ನೋಯಿಸಿದರು, ನಾವು ಮುಂದೆ ಸಾಗಲೇಬೇಕು,,, ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ.”

“ಸೌಂದರ್ಯಕ್ಕೆ ಬಹಳ ಬೇಗ ಮರುಳಾಗಿಬಿಡುತೇವೆ ಆದರೆ, ಬಾಳಬೇಕಾಗಿರುವುದು ವ್ಯಕ್ತಿತ್ವದ ಜೊತೆಗೆ ಎಂಬ ವಾಸ್ತವ ಗೊತ್ತಿರುವುದಿಲ್ಲ.”

“ನಿಮ್ಮನ್ನು ಆಯ್ಕೆ ಮಾಡಿಕೊಳ್ಳುವವರನ್ನು, ನೀವು ಆಯ್ಕೆ ಮಾಡಿ.”

“ನಿಮ್ಮಲ್ಲಿ ಬೆಟ್ಟದಷ್ಟು ಒಳ್ಳೆಯತನ ಇದ್ರು, ಜನ ಮೊದಲು ಬೆರಳು ಮಾಡಿ ತೋರಿಸುವುದು ನೀವು ಮಾಡಿರೋ ಸಾಸಿವೆಯಷ್ಟು ಚಿಕ್ಕ ತಪ್ಪುಗಳನ್ನೇ.”

“”ದುಡ್ಡು ” ಎಲ್ಲರಿಗೂ ಸಿಗುತ್ತೆ.. ಆದರೆ “ಒಳ್ಳೆಯವರು” ದುಡ್ಡಿಗೆ ಸಿಗುವುದಿಲ್ಲ.”

“ಪ್ರೀತಿ ಮತ್ತು ಸ್ನೇಹ ಎಂಬ ಎರಡು ಅಕ್ಷರ ಬರಿಯಲು ಸ್ವಲ್ಪ ಜಾಗ ಸಾಕು ಉಳಿಸಿಕೊಳ್ಳಲು ವಿಶಾಲ ಹೃದಯ ಬೇಕು.”

ಬರೆದವನಿಗೆ ಅಳಿಸಲಾಗದ ಬರಸಿಕೊಂಡವನಿಗೆ ಓದಲಾಗದ ಬರಹ,,, “ಹಣೆಬರಹ”
Kannada Quotes about Trust

“ನಗಿಸಿದವರು ನಾಲ್ಕು ದಿನ ನೆನಪಿನಲ್ಲಿದ್ದರೆ.. “ನೋಯಿಸಿದವರು. ಜೀವನಪೂರ್ತಿ -ನೆನಪಿನಲ್ಲಿ ಉಳಿಯುತ್ತಾರೆ.”

“ಪ್ರತಿಯೊಬ್ಬರ ಕಷ್ಟಕ್ಕೆ ನೀ ಸ್ಪಂದಿಸು, ನಿನ್ನ ಕಷ್ಟಕ್ಕೆ ಖಂಡಿತ ಭಗವಂತ ಸ್ಪಂದಿಸುತ್ತಾನೆ.”

“ಕನಸು ಖುಷಿ ಕೊಡುತ್ತೆ ನಿಜವಾಗಿರಲ್ಲ ಬದುಕು ನಿಜವಾಗಿರುತ್ತೆ ಖುಷಿಯಾಗಿರಲ್ಲ.”

“ನೋಡ್ ತಮ್ಮಾ…. ತಾಯಿ ಇರುವಷ್ಟು ಕಾಲ ನಾವು ಇರುತ್ತೇವೆ ಆದ್ರೆ, ನಾವು ಇರು ಅಷ್ಟು ಕಾಲ ತಾಯಿ ಇರಲ್ಲ. ಅದಕ್ಕೆ ಅವರು ಇರುವಷ್ಟು ಕಾಲ ಸಂತೋಷದಿಂದ ನೋಡಿಕೊಳ್ಳಿ.”

“ಆತ್ಮೀಯತೆ ಅನ್ನುವುದು ಒತ್ತಾಯದಿಂದ ಬರುವಂತದಲ್ಲ,, ಹೃದಯದಿಂದ ಬರುವಂತದ್ದು.”

“ಜೀವನ ಎಂದರೆ ಅಭಿನಂದಿಸುವುದಲ್ಲ,,,, ಅನುಭವುಸುವುದು.”

“ನೀನಗೆ ಮರ್ಯಾದೆ ಸಿಗದ ಜಗದಲ್ಲಿ ನೀನು ಹಾಕುವ ಚಪ್ಪಲಿಯನ್ನು ಕೂಡ ಬಿಡಬೇಡ.”

“ಉಪ್ತಿನಂತಾಗಿ ಹೋಗಿದೆ ಬದುಕು, ಜನರು ಅವರವರ ರುಚಿಗೆ ತಕ್ಕಷ್ಟು ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ.”

“ಬೇಡವೆಂದ ಸಂಬಂಧಕ್ಕಾಗಿ ಪರದಾಡಬೇಡ ..! ಬೇಡವೆಂದು ಬಿಟ್ಟು ಹೋದಮೇಲೆ ಚಿಂತೆ ಮಾಡಿ ಕೊರಗಬೇಡ.”

“ನಮ್ಮಿಂದ ದೂರ ಇರಲು ಬಯಸುವವರಿಂದ ಅವರಿಗಿಂತ ಮೊದಲು ನಾವೇ ಹೆಚ್ಚು ಹೆಚ್ಚು ದೂರ ಇದ್ದು ಬಿಡಬೇಕು.”

“ಸಿಕ್ಕ ಸಿಕ್ಕವರನ್ನ ಸಿಕ್ಕಾಪಟ್ಟೆ ಇಷ್ಟ ಪಡುವುದಕ್ಕಿಂತ ಇಷ್ಟ ಪಟ್ಟವರನ್ನ ಇಷ್ಟಪಟ್ಟಾದರೂ ಪ್ರೀತಿಸಬೇಕು ಅದೇ ನಿಜವಾದ ಪ್ರೀತಿ.”

“ನಮ್ಮ ನಡವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ ಏನಾಯ್ತು ಅಂತ ಕೇಳ್ತಾರಲ್ಲ ಅವರೇ ನಮ್ಮವರು.”

“ಕೆಲವರನ್ನು ತುಂಬಾ ಎತ್ತರದ ಸ್ಥಾನದಲ್ಲಿ ಇಟ್ಟಿರ್ತಿವಿ ಆದರೆ ಅವರು ನಮ್ಮನ್ನು ತುಂಬಾ ಕೆಳಮಟ್ಟದಲ್ಲೇ ನೋಡುತ್ತಿರುತ್ತಾರೆ.”

“ಮನಸ್ಸು ಎನ್ನುವದು ನೀರಿದಂತ್ತೆ, ಹೆಚ್ಚು ಕಲಕಿದರೆ ಏನೂ ಕಾಣುವುದಿಲ್ಲ. ಅದು ಶಾಂತವಾಗಿದ್ದರೆ ಮಾತ್ರ ಎಲ್ಲವು ಸ್ಪಷ್ಟವಾಗಿ ಕಾಣುತ್ತದೆ.”

“ಕೆಲವರು ಹಣವಿದೆ ಎಂದು ಮೆರೆಯುತ್ತಾರೆ,, ಇನ್ನು ಕೆಲವರು ಸೌಂದರ್ಯವಿದೆ ಎಂದು ಬೀಗುತ್ತಾರೆ.ಆದರೆ ಮುಂದೊಂದು ದಿನ ತಿಳಿಯುವುದು ಎಲ್ಲದಕ್ಕೂ ಮಿಗಿಲಾದದ್ದು “ಗುಣ” ಎಂದು.”
Heart Touching Love Quotes Kannada

“ನಮ್ಮ ಬಗ್ಗೆ ನಮಗೆ clarity ಇಲ್ಲದೆ ಇರುವಾಗ, ಇನ್ನೂ ಬೇರೆಯವರ purity ಬಗ್ಗೆ ಮಾತನಾಡುವ ಯೋಗ್ಯತೆ ನಮಗೆ ಇಲ್ಲ.”

“ಸಹಿಸಿಕೊಂಡು ಇರುವವರೆಗೂ ಮಾತ್ರ ನಮ್ಮವರು… ಒಂದೇ ಒಂದು ಸಾರಿ ತಿರುಗಿಸಿ ಸರಿಯಾಗಿ – ಉತ್ತರ ಕೊಟ್ಟರೆ ನಮ್ಮವರೇ ನಮಗೆ“ವೈರಿಗಳು… ಇಷ್ಟೇ ಇವಾಗಿನ ಸಂಬಂಧಗಳು.”

“ಒಂದು ಹೆಣ್ಣಿನ ಮನಸ್ಸಿಗೆ ತೀರಾ ಆಘಾತ ” ಆಗುವುದು, ಅವಳ ಆಸೆ, ಕನಸಿಗೆ ತಿಲಾಂಜಲಿ ಬೀಳುವುದು ಯಾವಾಗ ಅಂದ್ರೆ, ಅವಳು ಪ್ರೀತಿಸಿದವ’ ಕೈಕೊಟ್ಟಾಗ, ‘ಇಲ್ಲ ತಂದೆ ಹುಡುಕಿದ ಗಂಡ ಅವಳ ಕೈಬಿಟ್ಟಾಗ.”

“ಇಲ್ಲಿ ಮನಸಿಗೆ ಒಪ್ಪಿ ಮದುವೆಯಾದವರಿಗಿಂತ ಪರಿಸ್ಥಿತಿಗೆ ಒಪ್ಪಿ ಮದುವೆಯಾದವರೇ ಜಾಸ್ತಿ.”

“ಆರ್ಥಿಕ ಸ್ಥಿತಿ ಎಷ್ಟೇ ಚೆನ್ನಾಗಿದ್ದರೂ ಕೂಡಾ ಜೀವನದ ನಿಜವಾದ ಸಂತೋಷವನ್ನು ಅನುಭವಿಸುವುದಕ್ಕೆ ಮಾನಸಿಕ ಸ್ಥಿತಿ ಚೆನ್ನಾಗಿರುವುದು ಅಷ್ಟೇ ಅವಶ್ಯಕ.”

“ನಾವು ಮುಚ್ಚಿಟ್ಟಷ್ಟು ಹೆಚ್ಚಾಗುವುದು ಹಣವಲ್ಲ ಕೇವಲ ಪ್ರೀತಿ ಮಾತ್ರ.”

“ಹೆಣ್ಣಿಗೆ ಎಲ್ಲವನ್ನೂ ಕಲಿಯುವುದು ಗೊತ್ತು, ಎಲ್ಲರಿಗೂ ಕಲಿಸುವುದು ಗೊತ್ತು, ಅದೇ ಅವಳಿಗೆ ದೇವರು ಕೊಟ್ಟ ಸಂಪತ್ತು.”

“ಜೊತೆಗೂಡೀಆಡಿದ ಮಾತು ಜೊತೆಯಲ್ಲಿ ಕಳೆದ ಸಮಯ ಜೊತೆಸೇರೀ ಕೂಡಿಟ್ಟ ಕನಸು, ಜೊತೆಯಲ್ಲೇ ಬದುಕುವ ಆಸೆ, ಎಲ್ಲವನ್ನೂ ಮರೆತಿರುವೆ ನೀನು,ಆದರೆ ಎಲ್ಲವನ್ನೂ ನೆನೆಯುತ್ತಿರುವ ದಿನವೂ ನಾನು.”

“ಹೆತ್ತವರು ತಮ್ಮ ಮಗಳಿಗೆ ಒಳ್ಳೆ ವಿದ್ಯೆ, ಹುದ್ದೆ ಕೊಡಲಿಲ್ಲ ಅಂದ್ರು ಅವಳಿಗೆ ಬದುಕು ಕಷ್ಟ ಅನಿಸಲ್ಲ, ಆದರೆ ಅವಳು ಸೇರುವ ಮನೆ ಸರಿಯಿಲ್ಲ ಅಂದ್ರೆ ಅವಳು ಮರಳಿ ಜೀವಂತ ನಿಮ್ಮ ಬಳಿ ಬರಲ್ಲ.”

“ಕೋಪ ಮತ್ತೆ ಬೇಜಾರು ಒಂತರಾ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೇ… ವ್ಯತ್ಯಾಸ ಏನಂದ್ರೆ ಕೋಪದಲ್ಲಿದ್ದಾಗ ಸಾವಿರ ಮಾತಾಡಬಹುದು ಆದ್ರೆ ಬೇಜಾರಲ್ಲಿದ್ರೆ ಒಂದೇ, ಒಂದು ಮಾತು ಹೊರಬರೋಲ್ಲ.”

“ಹೆಣ್ಣಿನ ಬಣ್ಣ ನೋಡಿ ಪ್ರೀತಿಸಬೇಡಿ ಬುಗುರಿ ತರ ಆಡಿಸುವಳು,ಒಳ್ಳೆ ಮನಸ್ಸು ನೋಡಿ ಪ್ರೀತ್ಸಿ ಮಗು ತರ ಪ್ರೀತಿಸುವಳು.”

“ಕೆಲವೊಂದು ಜೀವದ ಜೊತೆ ಮಾತಾಡಿದಾಗ ನನ್ನೊಳಗಿರೋ ನೋವು ನಗುತ್ತೆಂದರೆ… ಆ ಜೀವದ ಮನಸ್ಸು ಎಷ್ಟು ಸುಂದರವಿರಬಹುದು.”

“ಓದಿನಿಂದ ಕಲಿತ ಪಾಠಗಳು ಮರತರು ಮರೆಯಬಹುದು ಆದರೆ. ಜೀವನದಲ್ಲಿ ಅನುಭವದಿಂದ ಕಲಿತ ಪಾಠವನ್ನು ಮರೆಯಲು ಸಾಧ್ಯವಿಲ್ಲ.”

“ನಿನ್ನ ಯಾರಾದರೂ ಅವಮಾನಿಸಿದರೆ ಹೆದರಬೇಡ, ಹುಚ್ಚು ಜನು ವಜ್ರವನ್ನು ಗಾಜು ಅಂದುಕೊಂಡಿರುತ್ತಾರೆ.”

“ಯಾವತ್ತೂ ಕಾಯುತ್ತ ಯೋಚಿಸುತ್ತ ಕಾಲ ಕಳೆಯಬೇಡ, ಏಕೆಂದರೆ ಬದುಕು ಯೋಚೆನೆಗಳಿಗಿಂತಲೂ ವೇಗವಾಗಿ ಸಾಗುತ್ತಿರುತ್ತದೆ.”
Love Feeling Quotes in Kannada

“ನಮ್ಮ ದೇಹಕ್ಕೆ expire date ಯಾವಾಗ ಅಂತ ಆ ದೇವರಿಗೆ ಗೊತ್ತು ಹಾಗೆ ನಮ್ಮ ಆಸೆಗಳಿಗೆ ಫೈರ್ ಹಚ್ಚುವುದು ಹೇಗೆ ಅಂತ ನಮ್ಮ ಜೊತೆ ಪ್ರೀತಿಯ ನಾಟಕ ಆಡುವವರಿಗೆ ಗೊತ್ತು.”

“ನಾನ್ ಯಾಕೆ ಮೊದಲು CALL ಮಾಡಬೇಕು ಅಥವಾ MSG ಮಾಡಬೇಕು ಅನ್ನೋದು ಅಹಓ..ಯಾವಾಗ್ಲೂ ನಾನೇ ಯಾಕೆ ಮೊದಲು CALL ಅಥವಾ MSG ಮಾಡಬೇಕು ಅಂತ ಅರಿತುಕೊಳ್ಳೋದು ಸ್ವಾಭಿಮಾನ….. ಎರಡಕ್ಕೂ ತುಂಬಾನೇ – ವ್ಯತ್ಯಾಸ ಇದೆ.”

“ಸಂಬಂಧವನ್ನ ಕಡಿದುಕ್ಕೊಳ್ಳೋದು ಕಷ್ಟನೇ ನಿಜ.. ಆದ್ರೆ ನಮ್ಮ ತನವನ್ನೆ ಪ್ರತಿದಿನ ಕೊಲೆಮಾಡೋ ಅಂತ ಸಂಬಂಧಗಳಿಂದ ದೂರ ಆಗೋದೇ ಉತ್ತಮ.”

“ಜೀವನ ನಿಮಗೆ ಎರಡನೇ ಅವಕಾಶ ಕೊಡಬಹುದು ಆದ್ರೆ ಜೀವನದಲ್ಲಿ ಬರೋ ಅಂತಾ ವ್ಯಕ್ತಿಗಳು ಪದೇ ಪದೇ ಅಥವಾ ಎರಡನೇ ಅವಕಾಶ ಕೊಡೋಲ್ಲ ಅದಕ್ಕೆ ಹತ್ತಿರ ಇದ್ದಾಗಲೇ ಗೌರವಿಸಿ ಪ್ರೀತಿಸಿ, ಒಂದು ಸಾರಿ ದೂರ ಆದಮೇಲೆ ಏನೇ ಮಾಡಿದರು ಪ್ರಯೋಜನವಿಲ್ಲ.”

“ಒಂದು ಹೆಣ್ಣಿಗೆ ಎಷ್ಟೇ ಕಷ್ಟ ಇರಲಿ,, ಯಾರೇ ನೋವುಂಟು ಮಾಡಲಿ, ಎಲ್ಲವನ್ನೂ ಮರೆತು ಅವಳು ಮನಬಿಚ್ಚಿ ನಗುವುದು ತನ್ನ ಮಕ್ಕಳ ಜೊತೆ ಮಗುವಾದಾಗ ಮಾತ್ರ.”

“ಮರ್ಯಾದೆ ಎಲ್ಲರಿಗೂ ಕೊಡೋಣ… ಆದ್ರೆ ನಂಬಿಕೆ ಯೋಗ್ಯರ ಮೇಲೆ ಮಾತ್ರ ಇಡೋಣ.”

“ಈ ಹೊಟ್ಟೆ ತುಂಬಿದವರಿಗೆ ಊಟ ಕೊಡೋದು,,,ದುಡ್ಡಿನ ಅಮಲಿನಲ್ಲಿ ತೇಲುತ್ತಲಿರೋರಹತ್ರ ಕಷ್ಟ ಹೇಳ್ಕೊಳೋದು… ಎರಡು ಸ್ವಲ್ಪಾ ಒಂದೇ ತರ ಎರಡಕ್ಕೂ ಬೆಲೆ ಸಿಗುಲ್ಲಾ ವ್ಯರ್ಥ ಅಷ್ಟೇ.”

“ಎಲ್ಲರ ಬದುಕಿನಲ್ಲಿ ಇರುತ್ತದೆ ಒಂದು ಸುಂದರ ಕಥೆ. ಆದ್ರೆ ಈ ನನ್ನ ಜೀವನ ಸುಂದರ ಆಗಬೇಕು ಅಂದ್ರೆ ನೀವು ಇರಬೇಕು ನನ್ನ ಜೊತೆ.”

“ಮೊದಲು ನಾ ಅಷ್ಟು ಅಳೋಕೆ ಸುರು ಮಾಡಿದೆ…..ನೀನು ನಂಗೆ ಒಂದು ಮಾತ್ ಹೇಳ್ತಿದ್ದೆ ಹೀಗೆ ಅಳೋದು ನೋಡಿದ್ರೆ ನಂಗೆ ತಡಿಯೋಕೆ ಆಗ್ತಿಲ್ಲ ಅಂತ,,,,,, ಆದ್ರೆ…..ಈಗ ನೀನೆ ಏಳೇಳು ಜನ್ಮ ಆಗೋವಷ್ಟು ಕಣ್ಣೀರು ಹಾಕಿಸ್ತಿದ್ದೀಯಾ.”

“ಒಂದು ಹುಡುಗಿ ಯಾರ ಹತ್ರಾನೂ ಹೇಳಿಕೊಳ್ಳಲಾಗದ Problems ನ ತನ್ನ ತಾಯಿಯ ಬಳಿ ಹೇಳಿಕೊಳ್ಳುತ್ತಾಳೆ,,, ಹಾಗೆಯೇ,ಯಾವುದೇ ಸಂತೋಷದ ವಿಷಯವಾಗಲಿ ತನ್ನ ತಂದೆಯ ಬಳಿ ಹಂಚಿಕೊಳ್ಳುತ್ತಾಳೆ,, ಆದರೆ ಸಂತೋಷವಾಗಿ ದುಃಖವಾಗಲಿ,, ಎಲ್ಲವನ್ನು ನಿನ್ನ ಜೊತೆ ಹಂಚಿಕೊಳ್ಳುತ್ತಿದ್ದಾಳೆ ಅಂದ್ರೆ, ತನ್ನ ಮನಸಲ್ಲಿ ತನ್ನ ತಂದೆ-ತಾಯಿಗಳಿಗೆ ಮೀರಿದ ಸ್ಥಾನವನ್ನ ನಿನಗೆ ಕೊಟ್ಟಿದ್ದಾಳೆ ಅಂತ ಅರ್ಥ.”

“ಲೇ ಹುಡುಗಾ ನೀ ಕೊಟ್ಟ ನೆನಪಿನ ಕಾಲ್ಗೆಜ್ಜೆಯು ನೀರಲ್ಲಿ ನೆನೆದಾಗ ಎಲ್ಲಿ ನಿನಗೆ ನೆಗಡಿ ಯಾಗುವುದೋ ಎಂದು ನೆನೆನೆನೆದು ನಗು ಉಕ್ಕಿ ಬರುತ್ತಿದೆಯಲ್ಲೊ.”

“ಅತಿಥಿಗಳು ಮನೆಗೆ ಯೋಗಕ್ಷೇಮ ಕೇಳಲು ಬರಬೇಕೆ ಹೊರತು ಸಮಸ್ಯೆಗಳನ್ನು ಬಗೆಹರಿಸಲು ಬರಬಾರದು.”

“ಸಾಧಿಸುವ ಮುನ್ನ ಅಸಹ್ಯವಾಗಿ ನೋಡುತ್ತಾರೆ, ಸಾಧಿಸಿದ ನಂತರ ವಿಶೇಷವಾಗಿ ನೋಡುತ್ತಾರೆ.”

“ಹಾಗೇ ಇರಲಿ ನೋಟ ನನಗಂತು ಮುಂಗಾರುಮಳೆಯಲಿ ಬೆಳೆದ ಭತ್ತದ ತೆನೆ ನೋಡಿದಷ್ಟೆ ಖುಷಿಯಾಗುತ್ತಿದೆ.”

“ವೇಶ್ಯ ತನ್ನ ಆತ್ಮಕಥೆಯ ಪುಟದಲ್ಲಿ ಬರೆದ ಮೊದಲ ಸಾಲುಗಳು “,,”ಮೈ ಮಾರಿಕೊಂಡೇ ಆದರೆ ಮನಸ್ಸಲ “
Love Feeling Quotes in Kannada

“ಮದುವೆಯಾಗಿ ಬಂದ ಹೆಣ್ಣಿನ ಬಳಿ ತವರು ಮನೆಯಿಂದ ಏನೇನು ತಂದೆ? ಎಂದು ಕೇಳುವವರೇ ಹೆಚ್ಚು. ಆದರೆ ಯಾರು ಕೂಡ, ಏನೇನು ಬಿಟ್ಟು ಬಂದೆ ಎಂದು , ವಿಚಾರಿಸುವುದಿಲ್ಲ.”

“ಕೆಲವೊಬ್ಬರು ಜೀವನವನ್ನು ಕಲಿಸುತ್ತಾರೆ. ಆದ್ರೆ ಜೀವನದ ಉದ್ದಕ್ಕೂ ಇರುವುದಿಲ್ಲ.”

“ನಮಗೆ ರಾಯಲ್ ಆಗಿ ಇರೋದು ಗೊತ್ತು, ಲೋಕಲ್ ಆಗಿ ಇರೋದು ಗೊತ್ತು ಆದ್ರೆ ನಾವು ಯಾವಾಗೂ ಸಿಂಪಲ್ಲಾಗಿ ಇರೋಕೆ ಇಷ್ಟಪಡ್ತೀವಿ.”

“ಮನಸ್ಸು ಬೇಸರದಲ್ಲಿದ್ದಾಗ ಬೇಕಾಗಿರುವುದು ಕೆಲಸಕ್ಕೆ ಬಾರದ ಭೋಧನೆಯಲ್ಲ ನೋವಿಗೆ ಸ್ಪಂದಿಸುವ
ಮನಸ್ಸು.”

“ಬಂಜೆಯೊಬ್ಬಳು ಅಡುಗೆ ಮಾಡಿ, ಭಿಕ್ಷುಕನಿಗಾಗಿ ಕಾದು ಕುಳಿತಿದ್ದಳು. ಕಾರಣ ಅವನು ಕೂಗುವ ‘ಅಮ್ಮಾ’ ಎಂಬ ಶಬ್ದ ಕೇಳಲು.”

“ನಾವಿರುವ ಜಾಗಕ್ಕೆ ಇನ್ಯಾರೋ ಬಂದಿದ್ದಾರೆ ಎಂದು ತಿಳಿದಾಗ ನಮ್ಮ ಪಾಡಿಗೆ ನಾವಿರಬೇಕು.”

“ನೋಡಿದಾಕ್ಷಣ ಗೊತ್ತಾಗೋಕೆ, ಮಾತಾಡಿದಾಕ್ಷಣ ಅರ್ಥವಾಗೋಕೆ ಸ್ತ್ರೀ ವಸ್ತುವಲ್ಲ. ಹೆಣ್ಣಿಗೂ ಕೂಡ ಮನಸ್ಸಿದೆ, ಸ್ವಾತಂತ್ರ್ಯಕೊಡಿ. ಬುದ್ದಿ ಇದೆ, ಅಂದುಕೊಂಡಿದನ್ನ ಮಾಡಲು ಬಿಡಿ. ಅವಳಿಗೂ ಹೃದಯವಿದೆ, ಪ್ರೀತಿಮಾಡೋಕೆ ಬಿಡಿ. ಪ್ರಾಣವಿದೆ, ಜೀವನ ಮಾಡೋಕೆ ಬಿಡಿ.”

“ಹೆಣ್ಣಿನ ಭಾವನೆಗಳಿಗೆ ಯಾರು ಬೆಲೆ ಕೊಡದಿದ್ದರು ಯಾರು ಪ್ರೀತಿಸದಿದ್ದರು ಸಹಿಸುವಳು ಆದರೇ ತನ್ನ ಪತಿಯು ಅವಳಿಗೆ ಬೆಲೆ ಕೊಡದೇ ಅವಳನ್ನು ಪ್ರೀತಿಸದಿದ್ದರೆ ನರಕ ಯಾತನೆ ಅನುಬವಿಸುವಳು.”

“ಭೂಮಿಗೆ ಭಾರ ಆದರೂ ಪರವಾಗಿಲ್ಲ ಆದರೆ ಬೇರೆಯವರ ಮನಸ್ಸಿಗೆ ಎಂದು ಭಾರ ಆಗಬಾರದು ಜೀವನಕ್ಕೆ ಬೆಲೆನೆ ಇರಲ್ಲ.”

“ನಿನ್ನ ಮಾತಿಗೆ ಎಲ್ಲಿ ಬೆಲೆ ಇದೆಯೋ ಅಲ್ಲಿ ಮಾತನಾಡು… ಸುಮ್ಮ ಸುಮ್ಮನೇ ಎಲ್ಲೆಲ್ಲೂ ಮಾತಾನಾಡಿ ನಿಮ್ಮ ಮತ್ತು ನಿಮ್ಮ ಮಾತಿನ ಬೆಲೆಯನ್ನು ಕಳೆದು ಕೊಳ್ಳಬೇಡಿ.”

“ಬರೀ ಕಣ್ಣಿನಿಂದ ನೋಡಿದ್ರೆ ಎಲ್ಲಾರಲ್ಲು ದ್ವೇಷ ಕಾಣುತ್ತೆ ಒಂದು ಸಲ ಹೃದಯ ದಿಂದ ನೋಡು ಇಡಿ ಜಗತ್ತೆ ಸುಂದರವಾಗಿ ಕಾಣುತ್ತೆ.”

“ಬದುಕು ಎಂದರೆ ನದಿಯ ಹಾಗೆ ಕೊನೆ ಇಲ್ಲದ ಪಯಣ… ಯಾವುದೂ ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದಿಲ್ಲ… ಉಳಿಯುವುದು ಒಂದೇ.. ಹೃದಯ ತಟ್ಟಿದ ನೆನಪುಗಳು ಮಾತ್ರ.”

“ಒಳ್ಳೆಯ ಪುಸ್ತಕಗಳು, ಒಳ್ಳೆಯ ವ್ಯಕ್ತಿಗಳು, ಸುಲಭವಾಗಿ ಅರ್ಥವಾಗುವುದಿಲ್ಲ. ಸರಿಯಾಗಿ ಓದಬೇಕಾಗುತ್ತದೆ.”

“ಹೆಣ್ಣಿನ ಸೌಂದರ್ಯ ನೋಡೋಕೆ ಕಣ್ಣಿರಬೇಕು ನಿಜ ಆದರೆ,,, ಅಂತರಂಗದ ಸೌಂದರ್ಯ ನೋಡಕ್ಕೆ ಸ್ವಚ್ಛ ಮನಸ್ಸಿರಲೇಬೇಕು.”

“ಅದೃಷ್ಟ ಅಂದ್ರೆ ಏನ್ ಗೊತ್ತಾ,,,, ನಾವು ಯಾರನ್ನ ಪ್ರೀತಿ ಮಾಡ್ತಿವೋ, ಅವರು ನಮ್ಮನ್ನ ನಮಗಿಂತ
ಎರಡು ಪಟ್ಟು ಹೆಚ್ಚಾಗಿ ಪ್ರೀತಿಸುವುದು.”
Love Failure Quotes Kannada

“ದಿನವೆಲ್ಲಾ ನಿನ್ನ ಬಗ್ಗೆ ಯೋಚಿಸುವ ಒಬ್ಬ ಹುಚ್ಚಿ ಇರ್ತಾಳೆ, ಈಗ ಅದರ ಜೊತೆ ಸ್ವಲ್ಪ ಹೊತ್ತು ಮಾತಾಡಬೇಕು, ಇಲ್ಲ ಅಂದ್ರೆ ಅಳ್ತಾಳೆ, ಅನ್ನೋ ಆಲೋಚನೆ ಏನಾದ್ರು, ಇದ್ದೀಯ ನಿನಗೆ.”

“ಪ್ರೀತಿಗೆ ವಯಸ್ಸು ಹಣ ಮುಖ್ಯವಲ್ಲಾ ಒಳ್ಳೆಯ ಮನಸ್ಸು ಮುಖ್ಯ.”

“ತಪ್ಪು ಮಾಡಿದ್ರೂ ಅಂತ ಬಿಟ್ಟೋಗೊದಲ್ಲಾ ಪ್ರೀತಿ, ತಿದ್ದಿ ಜೋತೆಗಿರೋದು ನಿಜವಾದ ಪ್ರೀತಿ.”

“ಗುಣವಂತನಾದ ಗಂಡನ ಜೊತೆ ಗುಡಿಸಲಿನಲ್ಲಿ ಇರಬಹುದು,,, ಆದರೆ ಅರ್ಥ ಮಾಡಿಕೊಳ್ಳಲಾರದ ಗಂಡನ ಜೊತೆ ಅರಮನೆಯಲ್ಲಿ ಕೂಡ ಇರಲು ಸಾಧ್ಯವಿಲ್ಲ.”

“ಕಹಿಯಾದ ಸತ್ಯ..ತಪ್ಪುಗಳು ಸೊಸೆ ಮತ್ತು ಮಗಳು ಇಬ್ಬರಿಂದ ಆಗುತ್ತವೆ ಮಗಳು ತಪ್ಪುಗಳು ಮುಚ್ಚಿಡಲಾಗುತ್ತದೆ ಸೊಸೆಯ ತಪ್ಪುಗಳನ್ನು ಪ್ರಿಂಟ್ ಮಾಡಿ ಎಲ್ಲರಿಗೂ ಹಂಚಲಾಗುತ್ತದೆ.”

“ಆರೋಗ್ಯವೇ ಅತಿ ದೊಡ್ಡ ಉಡುಗೆರೆ, ನೆಮ್ಮದಿಯೇ ಮಹಾ ಸಂಪತ್ತು, ನಂಬಿಕೆಯೇ ನಿಜವಾದ ಸಂಬಂಧ.”

“ಹೆಣ್ಣಾಗಿ ಜೀವನ ಮಾಡುವುದು ಸುಲಭದ ಆಟವಲ್ಲ . ಪ್ರತಿದಿನ ಸೂರ್ಯನಾಗಿ ಹುಟ್ಟ ಬೇಕಾಗುತ್ತದೆ, ಎದುರಿಗೆ ಘನವಾದ ಕತ್ತಲೆ ಇದ್ದರು ಎಲ್ಲರ ಜೀವನದಲ್ಲಿ ಬೆಳಕನ್ನು ಕೊಡಬೇಕಾಗುತ್ತದೆ.”

“ಹಣವೇ ಮುಖ್ಯಅಂದುಕೊಂಡವನಿಗೆ ಒಳ್ಳೆಯತನ ಕಡಿಮೆ,,,,, ಒಳ್ಳೆಯ ತನವೆ ಮುಖ್ಯ ಅಂದುಕೊಂಡವನಿಗೆ ಹಣಕಡಿಮೆ.”

“ಸಿಹಿ ಹಣ್ಣು ಕೊಡುವ ಮರವೆ ಜನರಿಂದ ಹೆಚ್ಚು ಹೆಚ್ಚು ಕಲ್ಲೇಟು ತಿನ್ನುವುದು..ಹಾಗೇಯೇ ಎಲ್ಲರ ಒಳಿತನ್ನು ಬಯಸುವ ಹೆಣ್ಣಿಗೆ ಹೆಚ್ಚು ಕಷ್ಟ ನಿಂದನೆ ಅಪವಾದಗಳು ಬರುವುದು.”

“ಕೊನೆವರೆಗೂ ಜೊತೆಲಿ ಇರ್ತಿವಿ ಅಂತ ಹೇಳ್ತಾರೆ ಆದರೆ ಯಾರೂ ಜೊತೆಗಿರಲ್ಲ… ಮದ್ಯದಲ್ಲೇ ಬಂದು ಮದ್ಯದಲ್ಲೇ ಹೋಗ್ತಾರೆ.. ಬರುವಾಗ ನಗು ತಂದು ಹೋಗುವಾಗ ಅಳು ಕೊಟ್ಟು ಹೋಗ್ತಾರೆ.”

“ನಿಮ್ಮ ಭಾವನೆಗಳಿಗೆ ಕಣ್ಣೀರಿನ ಸಹಾಯ ಕೊಡಬೇಡಿ ನಿಮ್ಮ ಸಿಟ್ಟಿಗೆ ನಾಲಗೆಯ ನೆರವು ನೀಡಬೇಡಿ.ಆಗ ನೀವು ಸದಾ ಸಂತಸದಿಂದ ಇರುತ್ತೀರಿ… ಹುಡುಕುತ್ತ ಹೋದ ಧರ್ಮರಾಯನಿಗೆ ಕೆಟ್ಟವರು ಸಿಗಲಿಲ್ಲ , ಎಷ್ಟು ಹುಡುಕಿದರೂ ಕೌರವನಿಗೆ ಒಳ್ಳೆಯವರ ದರ್ಶನವಾಗಲಿಲ್ಲ,,, ನೋಡುವ ದೃಷ್ಟಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.”

“ಇಷ್ಟ ಪಟ್ಟ ವಸ್ತುಗಳನ್ನು ಪಡೆದುಕೊಳ್ಳುವುದು ಮುಖ್ಯವಲ್ಲ … ಅವುಗಳನ್ನು ಕಳೆದುಕೊಂಡಾಗ ತಾಳ್ಮೆಯಿಂದಿರುವುದು ಮುಖ್ಯ.”

“ಜೀವನದಲ್ಲಿ ಯಾವಾಗಲೂ ಎರಡು ವಿಷಯಗಳಲ್ಲಿ ತುಂಬಾ ಜಾಗರೂಕರಾಗಿಬೇಕು,,, ಯಾರನ್ನು ಅತಿಯಾಗಿ ಪ್ರೀತಿಸಬಾರದು,, ಯಾರನ್ನು ಅತಿಯಾಗಿ ನಂಬಬಾರದು..”

“ಯಾರಿಗೆ ಯಾರು ಎಂದು ಆ ದೇವರು ಬರೆದಿರುತ್ತಾನೆ, ಪ್ರೀತಿ, ಪ್ರೇಮ ಅಂತ ನಾವು ಎಷ್ಟೇ ಪ್ರಯತ್ನ ಪಟ್ಟರೂ ಬರಿ ನೋವು, ದುಃಖ ನೆನಪು ಮಾತ್ರ.”
Beautiful Quotes in Kannada

“ಬೇರೊಬ್ಬರು ನಮ್ಮನ್ನು ಒಪ್ಪಲಿ ಬಿಡಲಿ, ಮುಖವಾಡ ಹಾಕಿ ಮೆಚ್ಚಿಸುವುದಕ್ಕಿಂತ ನಾವು
ನಾವಾಗಿರುವುದೇ ಚೆಂದ. ಜನ ನಮ್ಮ ನಾಟಕೀಯತೆ, ಬೂಟಾಟಿಕೆ, ಆಷಾಢಭೂತಿತನ ನಂಬುವಷ್ಟು ದಡ್ಡರಲ್ಲ.”

“Respect ತೆಗೆದುಕೊಳ್ಳುವುದು ದೊಡ್ಡದಲ್ಲ, ಅದನ್ನು ತೆಗೆದುಕೊಳ್ಳಲು ನಾವು perfect ಆಗಿ ಇದ್ದೀವಾ ಅಂತ ತಿಳಿದುಕೊಂಡರೆ ಒಳ್ಳೆಯದು.”

“ನಮಗೆ ಅರಿವಿಲ್ಲದೆ ಕಣ್ಣೀರು ಹರಿಯುತ್ತಿದ್ದರೆ, ನಮ್ಮ ದೇಹ ಬದುಕಿದೆ ಆದರೆ ಮನಸ್ಸು ಸತ್ತಿದೆ ಅಂತ.”

“ನಿನ್ನ ಅಗಲಿಕೆಯಿಂದ ಕರಗುತ್ತಿದೆ ನನ್ನ ಕನಸ್ಸು, ಅದರಿಂದಲೇ ದಿನವೂ ಸುಡುತ್ತಿದೆ ನನ್ನ ಮನಸ್ಸು, ತಡೆಯಲಾಗದೆ ನಾ ಬಯಸುತ್ತಿರುವೆ ಎಂದು. ಮುಗಿಯುವುದು ನನ್ನ ಆಯಸ್ಸು.”

“ಜೀವನದ ಹಾದಿಯಲ್ಲಿ ಸಿಗುವವರೆಲ್ಲ ಒಳ್ಳೆಯವರೆ ಆಗಬೇಕಂತೇನಿಲ್ಲ , ನಾವ್ ಒಳ್ಳೆಯವರಾದ್ರೆ ನಮ್ ಒಳ್ಳೆತನಕ್ಕೆ ಕೆಟ್ಟವರು ಸಹ ಸ್ವಲ್ಪ ಸಮಯ ಒಳ್ಳೆಯವರಾಗುತ್ತಾರೆ.”

“ಒಂದು ಹೆಣ್ಣಿಗೆ ನಾಲ್ಕು ಗೋಡೆ ಮಧ್ಯೆ ಅಪಮಾನವಾದರೆ ಸಹಿಸಿಕೊಳ್ಳುವಳು, ಅದೇ ನಾಲ್ಕು ಜನಗಳ ಮುಂದೆ ಅವಮಾನವಾದರೆ ತನ್ನ ನಿಜರೂಪ ತೋರಿಸುವಳು.”

“ಕೆಲವರು ಸತ್ತನಂತರವು ನಮ್ಮ ಮನಸ್ಸಿನಲ್ಲಿ ನೆನಪಾಗುವಂತೆ ಮಾಡುವುದು,ಅವರ ಒಳ್ಳೆಯ ನಡೆನುಡಿ,ಗುಣ ಮತ್ತು ಮರೆಯದಂತಹ ಮುಗ್ಧ ಸೌಂದರ್ಯ.”

“ಬೇಜಾರದಾಗೆಲ್ಲ ಡಿಪಿ Rewove ಮಾಡೋದಲ್ಲ… ಒಂದ್ ಸಾರಿ ಆ ಬೇಜಾರ್ಗೆ ಕಾರಣವಾದ ವ್ಯಕ್ತಿಯನ್ನ ಲೈಫ್ ಯಿಂದ Remove ಮಾಡಿ ನೋಡಿ ಏನಾದ್ರು ಸ್ವಲ್ಪಾ ವ್ಯತ್ಯಾಸ ಆಗಬಹುದು.”

“ಒಂದು ಹೆಣ್ಣು ತನ್ನ ನೋವೆಲ್ಲವನ್ನೂ ಇನ್ನೊಬ್ಬರ ಜೊತೆ ಕಣ್ಣೀರಿನ ಮೂಲಕ ತನ್ನ ಮನಸ್ಸಿನಿಂದ ಹೊರ ಹಾಕಿದರೆ ಅವಳು ಎಲ್ಲರಂತೆ ಮಾಮೂಲಿ ಮನುಷ್ಯ, ಎಲ್ಲಾ ನೋವನ್ನು ಮನಸ್ಸಲ್ಲೇ ಬಚ್ಚಿಟ್ಟುಕೊಂಡು ತನ್ನ ದುಃಖವನ್ನು ತಾನೇ ನುಂಗಿ ಬಾಳುತ್ತಿದ್ದರೆ ಅವಳೇ ದೇವತೆ.”

“ಜೀವನದಲ್ಲಿ ಎದುರಾಗೋ ಕಷ್ಟಗಳು ನಮ್ಮನ್ನ ಘಾಸಿಗೊಳಿಸೋದಷ್ಟೇ ಅಲ್ಲ ಬದಲಿಗೆ ಗಟ್ಟಿಯಾಗು ಮಾಡುತ್ತವೆ.”

“ಹೆಣ್ಣಿಗೆ ಪ್ರೀತಿಯಲ್ಲಿ ಕರಗುವುದು ಗೊತ್ತು, ತನ್ನ ಪ್ರೀತಿಯಿಂದ ಬೇರೆಯವರನ್ನು ಕೊರಗುವಂತೆ ಮಾಡುವುದು ಗೊತ್ತು.”

“ಹೆಣ್ಣು ಮಕ್ಕಳು ಮೈ ಮೇಲೆ ಎಷ್ಟಿದ್ದರೇನು ಚಿನ್ನ ಮನಸ್ಸಿಗೆ ನೆಮ್ಮದಿ, ಮುಖದಲ್ಲಿ ನಗು ಇಲ್ಲಾಂದ್ರೆ.”

“ಜನ ನಿಮ್ಮನ್ನ ಪ್ರೀತಿಸುತ್ತಾರೆ ಅಂತ ಜಾಸ್ತಿ ಒಳ್ಳೆಯವರಾಗಿ ಬದುಕಬೇಡಿ… ಅವರು ನಿಮ್ಮನ್ನ ಪ್ರೀತಿಸುವುದಿಲ್ಲ. ಉಪಯೋಗಿಸಿಕೊಳ್ಳುತ್ತಾರೆ.”

“ಮನಸ್ಸಲ್ಲಿ ಅಹಂಕಾರ ಇಟ್ಟುಕೊಂಡು ಮೈತುಂಬಾ ಅಲಂಕಾರ ಮಾಡಿಕೊಂಡರೆ ಏನು ಬಂತು ಪ್ರಯೋಜನ.”

“ಬೆಲೆ ಇಲ್ಲದ ಜಾಗದಲ್ಲಿ ನೆಲೆ ಕಾಣಬೇಡಿ; ಪ್ರೀತಿ ಇಲ್ಲದ ಜಾಗದಲ್ಲಿ ಆಶ್ರಯ ಕೇಳಬೇಡಿ.”
Kannada Love Quotes Images

“ಮಾಡುತಿರು ನನ್ನ ಹೃದಯಕೆ ನಿನ್ನ ಪ್ರೀತಿಯ ಸಂದಾಯ,,, ತಪ್ಪದೆ ಕಟ್ಟುವೆನು ನಾನು ನಿನಗೆ ಮುತ್ತುಗಳ ಕಂದಾಯ.”

“ಮೈಸೂರ್ ಪಾಕು ಅವಳ ಗಲ್ಲ ಕಚ್ಚಿ ತಿನ್ನೇಕು ಅನ್ನುತ್ತೆ ನೋಡಿದಾಗೆಲ್ಲ.”

“ಎಷ್ಟು ವರ್ಷ ಜೊತೆಗಿದ್ದರೇನು,,,, ಅಂತರಾಳವ ಅರಿಯದೆ ಮೇಲೆ.”

“ನೀನು ಕೊಡುವ ಆ ಮುತ್ತೆ? ” ನನ್ನ ಫೆವರಿಟ್ ಸ್ವೀಟ್ಸ್.”

“ಎರಡು ಪುಟ್ಟ ಹೃದಯಗಳು ಚನ್ನಾಗಿ ಇರೋದನ್ನಾ ಕಂಡರೇ ಖುಷಿ ಪಡಬೇಕೆ ಹೋರತ್ತು,,, ಬೆಂಕಿ ಹಚೂ
ಕೆಲಸಮಾಡಬೇಡಿ.”

“ಪರಿಸ್ಥಿತಿ ಏನೇ ಆಗಲಿ ಸಂದರ್ಭ ಯಾವುದೇ ಇರಲಿ ಸಮಸ್ಯೆ ಹೇಗೆ ಇರಲಿ ಜೀವ ಹೋಗೊವರೆಗು ಕೈಬಿಡುವುದಿಲ್ಲ ಎಂಬ ನಂಬಿಕೆ ಭರವಸೆ ಇದ್ದರೆ ಪ್ರೀತಿ ಮಾಡಿ.”

“ಕೆಲವು ಸ್ನೇಹಿತರು ಗಳು ಕೇವಲ ಸ್ನೇಹಿತರಾಗಿ ಇರುವುದಿಲ್ಲ, ಒಡಹುಟ್ಟಿದವರಿಗಿಂತ ಹೆಚ್ಚಿನ ಬಾಂಧವ್ಯ ಹೊಂದಿರುತ್ತಾರೆ.”

“ನಿನ್ನ ಮೇಲೆ ಪ್ರೀತಿ ಹೇಗೆ ಆಯಿತು ಗೊತ್ತಿಲ್ಲ,,, ಆದ್ರೆ ಈ ಪ್ರೀತಿಯ ಹುಚ್ಚು ಹಿಡಿಸಿದ ನಿನ್ನ ಯಾವತ್ತೂ ಮರೆಯೋಲ್ಲ.”

“ನಿನ್ನ ಯಾವಾಗ ನೋಡ್ತಿನೋ,, ನಿನ್ ಜೊತೆ ಯಾವಾಗ ಮಾತಾಡ್ತೀನೋ,, ನಿನ್ನ ಯಾವಾಗ ಮುದ್ದಾಡ್ತೀನೋ,, ಅಂತ ಕ್ಷಣ ಕ್ಷಣಕ್ಕು ಈ ಹೃದಯ ಒದ್ದಾಡುತ್ತೆ ಚಿನ್ನಿ.”

“ಬದುಕೆಂಬ ಪಯಣದಲ್ಲಿ ಖುಷಿಯಾಗಿ ಸಿಕ್ಕಿದ್ದು ನೀನು,,, ನಗುವನ್ನೇ ಮರೆತಿದ್ದ ನನಗೆ ನಗಿಸಿದ್ದು ನೀನು,,, ಯಾರಲ್ಲೂ ಸಿಗದಷ್ಟು ಆತ್ಮೀಯ ಬಾಂಧವ್ಯ ಕೊಟ್ಟಿದ್ದು ನೀನು,,, ಇಷ್ಟೆಲ್ಲ ನನಗೆ ಪರಿಚಯಿಸಿದ ನೀನು ಅಂದ್ರೆ ನನಗೆ ತುಂಬಾ ಇಷ್ಟ.”

“ಕೆಲವು ಸ್ನೇಹಿತರು ಗಳು ಕೇವಲ ಸ್ನೇಹಿತರಾಗಿರುವುದಿಲ್ಲ,,, ಒಡಹುಟ್ಟಿದವರಿಗಿಂತ ಹೆಚ್ಚಿನ ಬಾಂಧವ್ಯ ಹೊಂದಿರುತ್ತಾರೆ.”

“ಮಾತು ಮನಸ್ಸುಗಳನ್ನು ಒಂದು ಗೂಡಿಸಬೇಕೆ ಹೊರತು ಓಡೆಯಬಾರದು.”

“ಒಂದು ಕೋಟಿ ರೂಪಾಯಿ ನಮ್ಮ ಮುಂದೆ ಇದ್ದರೂ ನಮ್ಮ ನೋವು ದೂರ ಆಗಲ್ಲ, ಅದೇ ಒಂದು ಮುತ್ತು ಕೊಟ್ಟಾಗ ನಮ್ಮಲ್ಲಿರುವ ನೋವು, ದುಃಖ, ಕಣ್ಣೀರು, ಸಮಸ್ಯೆ ದೂರವಾಗುತ್ತೆ, ಆ ಮುತ್ತು ಪವಿತ್ರತೆಯಿಂದ ಕೂಡಿರಬೇಕಷ್ಟೇ, ನೋಡುವವರ ದೃಷ್ಟಿ ಸರಿಯಾಗಿದ್ದರೆ ಸಾಕು.”
Romantic Quotes in Kannada

“ನನ್ನ ಜೀವಕ್ಕೆ…ಜೀವಾ ಹಾಗಿರೋ ನನ್ನ…ಮುದ್ದು ಜೀವಾ ಕಣೇ ನೀನು.”

“ಮದುವೆ ಅನ್ನೋದು ಜಗತ್ತಿಗೆ ಸಾಕ್ಷಿ ಆದರೆ,,,, ಪ್ರೀತಿ ಅನ್ನೋದು ನಮ್ಮಿಬ್ಬ ಮನಸಿಗೆ ಸಾಕ್ಷಿ.”

“ಪ್ರೀತ್ಸೋರ ಹೆಸರು ಹೃದಯದಲ್ಲಿದ್ರೆ ಸಾಕಾಗಲ್ಲ,,, ಹಣೆಯಲ್ಲೂ ಆ ದೇವರು ಬರೆದಿರಬೇಕು.”

“ಸೃಷ್ಟಿಯಲ್ಲಿ ಮಧುರವಾದದ್ದು “ಪ್ರೀತಿ”, ಪ್ರೀತಿಯಲ್ಲಿ ಮಧುರವಾದದ್ದು ಮುತ್ತು(Kiss).“

“ಯಾವುದೇ ಹುಡುಗ ಒಂದು ಹುಡುಗಿಯ ಮುಂದೆ ತನ್ನ ತುಂಟತನ ತೋರಿಸ್ತಾನೆ ಅಂತ ಅಂದ್ರೆ ಆ ಹುಡುಗ ಹುಡುಗಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾನೆ ಅಂತ ಅರ್ಥ.”

“ಪ್ರೀತಿಸುವುದಿದ್ದರೆ ಇವತ್ತೇ ಕೊನೆಯ ದಿನವೆಂದು ಪ್ರೀತಿಸಿ ಯಾಕೆಂದರೆ ನಾಳೆ ಎಂಬುವುದು ನಮ್ಮದಲ್ಲ.”

“ನನ್ನ ಮನದಲಿ ಶುರುವಾಗಿದೆ ಪ್ರೀತಿಯ ದರಬಾರು ಇದಕೆಲ್ಲ ಕಾರಣ ನಿನ್ನ ಆ ನಗುವಿನ ಕಾರುಬಾರು.”

“ಪ್ರೀತಿ ಹೀಗಿರಬೇಕಂದ್ರೆ ಯಮನು ಕೂಡಾ ಒಂದು ಕ್ಷಣ ಯೋಚಿಸಬೇಕು ಹೇಗಪ್ಪಾ ಇವರನ್ನ ದೂರ ಮಾಡೋದು ಅಂತಾ.”

“ನಾನು ಯಾವತ್ತಾದ್ರೂ ನಿನ್ನ ಮೇಲೆ ಕೋಪ ಮಾಡಿಕೊಂಡು ನಿನ್ನನ್ನ ಬೈದುಬಿಟ್ಟರೆ, ನೀನು ನೋವು ಪಡಬೇಡ; ನಾನು ಸ್ವಲ್ಪ ಕೋಪ ಮಾಡಿಕೊಳ್ತಿನಿ ಆದರೆ,…ಅನಂತರ ಅದಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತೀನಿ.”

“ಮೇಲ್ನೋಟದ ನಕಲಿ ಸೌಂದರ್ಯವು ಸವಿಯ ನೀಡುವುದು ನಯನಕ್ಕೆ.. ಅಂತರಾಳದ ಉತ್ತಮ ಸೌಂದರ್ಯವು ಕುರೂಪಿಯಾದರು ಹಿತಬಯಸುವುದು ಮನಸ್ಸಿಗೆ.”

“ಈ ಮನಸ್ಸು ಮೊದಲು ಇಷ್ಟ ಪಟ್ಟಿದ್ದು ನಿನ್ನನ್ನೆ,,, ಮೊದಲು ಪ್ರೀತಿ ಇದ್ದು ನಿನ್ನನ್ನೆ,,, ಇವಾಗ ಪ್ರೀತಿ ಮಾಡ್ತಾ ಇರೋದು ನಿನ್ನನ್ನೆ,,, ಮುಂದೆ ಪ್ರೀತಿ ಮಾಡೊಡು ನಿನ್ನನ್ನೆ,,,, ಯಾವತ್ತು ಈ ಮನಸ್ಸು ನಿನ್ನ, ಪ್ರೀತಿ ಮಾಡೋದನ್ನ ನಿಲ್ಲಿಸುತ್ತೊ, ಆವತ್ತೆ ಈ ಉಸಿರು ಕೂಡ ನಿಲ್ಲತ್ತೆ..”

“ಒಬ್ಬಳು ಒಳ್ಳೆಯ ಗೆಳತಿ ಸಾವಿರಾರು ಪ್ರೇಯಸಿಯರಿಗೆ ಸಮ.”

“ನಾನು ನಿನ್ನಿಂದ ಹೆಚ್ಚಿಗೆ ಎನು ಕೇಳಲ್ಲ,,, ಸ್ವಲ್ಪ ಪ್ರೀತಿ, ಸ್ವಲ್ಪ ಸಮಯ ನೀಡಿದರೆ ಸಾಕು ಮುದ್ದು.”

“ಲೇ ಚಿನ್ನ,, ಅಸೆ ಪಟ್ಟು ತಗೊಂಡಿರೋ ಮೊಬೈಲ್ ನೇ 5 ನಿಮಿಷ ಬಿಟ್ಟಿರಲ್ಲ,,,ಅಂಥದ್ರಲ್ಲಿ ಮನಸಾರೆ ಪ್ರೀತಿಸಿರೋ ನಿನ್ನಾ ಬಿಟ್ಟು ಇರ್ತಿನಾ ಚಿನ್ನು.”

“ಮನಸುಗಳು ಹೊಡೆದು ಹೋದ್ರೆ ದೇಹದ ಮೇಲೆ ಅಸೆ ಬರೋಲ್ಲ,,, ದೇಹ ಹೊಡೆದು ಹೋಗಿದ್ರು ಮನಸು ಮನಸು ಒಂದಾಗಿ ಇರ್ತವೆ ಕೊನೆಗೆ ಪ್ರೀತಿ ಒಂದೇ ಮುಖ್ಯ ದೇಹ ಅಲ್ಲ.”
Kannada Love Feeling Images

“ಹೃದಯ ನಂದೇ ಆದ್ರೂ ಅದ್ರಲ್ಲಿರೋ ನೆನಪುಗಳು ಮಾತ್ರ ಬೇರೆಯವರದ್ದೇ.”

“ಒಂದೊಳ್ಳೆ ಸ್ನೇಹಾನಾ ಪ್ರೀತಿ ಅನ್ಕೊಂಡು ಸಂಬಂಧ ಹಾಳು ಮಾಡಿಕೊಳ್ಳಬೇಡಿ.”

“ಬದುಕು ಪ್ರತಿ ದಿನ ಪ್ರತಿ ಕ್ಷಣ ಏನೆಲ್ಲಾ ಪಾಠ ಕಳ್ಸಿದ್ರು,,, ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಅನ್ನೋ ಪಾಠ ಮಾತ್ರ ಎಷ್ಟೇ ಪ್ರಯತ್ನ ಪಟ್ರು ಅರ್ಥನೇ ಆಗ್ತಾ ಇಲ್ಲ ಇನ್ನು.”

“ನಿನ್ನ ನಗುವನ್ನೇ ಕೊದಿರೋರಿಗೋಸ್ಕರ ನೀನ್ ಅಳೋದ್ರಲ್ಲಿ ಅರ್ಥ ಇಲ್ಲಾ.”

“ಮನಸ್ಸಲ್ಲಿರೋ ಕೆಲವಂದು ವಿಷಯ ಹೇಳೋದಿಕ್ಕೆ ಧೈರ್ಯ ಬೇಕು.”

“ಹಠಕ್ಕೆ ಬಿದ್ದು ಗೆಲ್ಲೋದಕಿಂತ ಪ್ರೀತಿಯಿಂದ ಗೆಲ್ಲೋದು ಒಳ್ಳೆಯದು.”

“ತಿಳಿದುಕೋ… ಪ್ರತಿಯೊಬ್ಬ ವಕ್ತಿಯ ಜೀವನದಲ್ಲಿ ಒಬ್ಬರು ‘ವರವಾಗಿ’ ಬಂದರೆ, ಇನ್ನೊಬ್ಬರು ‘ಪಾಠವಾಗಿ’ ಬರುತ್ತಾರೆ.”

“ಕೆಲವರು ಏರೋದ್ರಲ್ಲೇ ಖುಷಿಂದ ಇರ್ತಾರೆ ಅಲ್ವಾ.”

“ಕಲ್ಪನೆಯಲ್ಲೂ ಅವನೆಷ್ಟು ಚಂದ ಕೈಗೇ ಸಿಗದಷ್ಟು ವರ್ಣಿಸಲಾಗದಷ್ಟು.”

“ಇದ್ದಾಗ ಸಹಾಯಕ್ಕೆ ಬಾರದೇ ಇರುವವರು ಸತ್ತಮೇಲೆ ಬರ್ತಾರೆ ಏನ್ ಜನನೋ ಗುರು.”

“ಅರಿಯದೇ ಹೋದ ಅವನು ನನ್ನ ಮನ ನಾ ಅರೆತರು ಕಾದಿದೆ ಅವನ ನೆನಪು.”

“ಹೇ ನೆನಪುಗಳೇ ಕ್ಷಣ ಕ್ಷಣಕ್ಕೂ ಕೊಲ್ಲದಿರಿ.”

“ಕನಸಿನೊಡತಿಯ ಹುಡುಕಾಟದಲಿ ಮುಂದುವರೆದಿದೆ ಅಲೆದಾಟ,, ಕನಸಲಿ ಕಾಡುತಿದೆ ಅವಳ ಮುಂಗುರುಳ ಮರೆಯ ಜುಮುಕಿಯ ರಾರಾಟ,, ಪದೇ ಪದೇ ನನ್ನ ನಿದ್ದೆಗೆಡುಸುತಿದೆ ಅವಳ ಕುಡಿಹುಬ್ಬಿನಲ್ಲೇ ಕೆಣಕುವ ನೋಟ.”

“ಮುಖವಾಡ ಹಾಕೊಂಡಿರೋ ಜನರಿಗಿಂತ,, ರಾತ್ರಿ ಕನಸಲ್ಲಿ ಬರುವ ದೆವ್ವಗಳೇ ಎಷ್ಟೋ ವಾಸಿ.”

“ಕೇಳು ನನ್ನೆದೆಯ ಪ್ರತಿ ಬಡಿತವು ನಿನಗಾಗಿ,, ನಿನ್ನ ಪ್ರೀತಿಗಾಗಿ.”
Kannada Love Feeling Dialogues

“ಅವನ ಬಗ್ಗೆ ಎಲ್ಲವನ್ನು ಅರಿತೇ ಆದರೆ ಮೋಸವನ್ನು ಅರಿಯದೇ ಹೋದೆ.”

“ಯಾರ್ ನಮ್ ಜೊತೆ ನಿಯತ್ತಾಗಿ ಇರ್ತಾರೋ,, ಯಾರ್ ನಿಯತ್ತಾಗಿ ಇರೋ ಹಾಗೆ ನಾಟಕ ಮಾಡ್ತಾರೋ ಅಂತ ಕಂಡು ಹಿಡಿಯೋದ್ರಲ್ಲೇ ನಮ್ ಜೀವನ ಮುಗಿದುಹೋಗುತ್ತೆ.”

“ಯಾವೂರ ಮಂದಾರವೂ ಇವಳು ಮನದಿ ಕಾಡುತಿಹಳು ಬಲುಹಿತವಾಗಿ,, ಭಾವನೆವಲಯಾದಿ ದಿನವೂ ಇವಳದೇ ದಿನಚರಿಯ ಸಿಹಿ ಭಾವನೆಗಳ ಅಲೆಯು ಒಲವಾಯಿತು ಕನಸಾಗಿ,, ಎನ್ನಂತರಂಗದಿ ಪೋಣಿಸಿದ ಪದಗಳಲಿ ಇವಳ ಮುಗುಳುನಗುವಂದು ನನ್ನೆಸರ ಪ್ರತಿಧ್ವನಿಸಿದಂತಾಗಿದೆ.”

“ಪ್ರೇಮದಂತರಂಗದೊಳಗಿನ ಅವಳೆಂಬ ಭಾವ ನನ್ನ ಮನದಿ ಮಡಿಚಿಟ್ಟ ಕಲ್ಪನೆಯ ಸಾಲು.”

“ಕಂಡ ಕನಸೇ ಬೇರೆ, ಸಾಗುತ್ತಿರುವ ದಾರಿನೇ ಬೇರೆ.”

“ಹೃದಯ ಕಲರವದಿ ಕಲ್ಪನೆಯೂಳು ಅವಿತು ಕುಳಿತು ಕಾಣದೆ ನನ್ನಲ್ಲೆ ಬೆರೆತ ಕಾವ್ಯಗಳೆಲ್ಲ ಕಾಲ್ನಡಿಗೆಯ್ಲಲಿ ಹೊರಟಂತಿವೆ ಇವಳ ಕಾಲ್ಗೆಜ್ಜೆಯ ಸದ್ದಿನ ಪದಗಳ ಸಾಲಿಗೆ.”

“ನನ್ನ ಪ್ರೀತ್ಸೋರಿಗೆ ನನ್ನ Care ಮಾಡೋರಿಗಷ್ಟೇ ನಾನ್ ಕೇರ್ ಮಾಡೋದು ನನ್ Life ನನ್ನಿಷ್ಟ ಗುರು.”

“ನನ್ನ ನೋವಿಗೆ, ಕಣ್ಣೀರಿಗೆ ನಾನೇ ಕರಣ ಅನ್ಸುತ್ತೆ ಯಾಕಂದ್ರೆ,, ಪ್ರೀತಿಯಲ್ಲಿ ನನ್ನದೇ ಆಯ್ಕೆ ತಪ್ಪಿತ್ತು.”

“ನಾ ಬಯಸಿದ ಪ್ರೀತಿ ನನ್ನಿಂದ ದೂರ ಸರಿದಿದೆ ನಾ ಬಯಸದ ಪ್ರೀತಿ ನನ್ನ ಬಳಿ ಬಂದು ನಿಂತಿದೆ.”

“ಪ್ರತಿಯೊಂದು ಕನಸಲ್ಲೂ ನೀನೇ ಇರುವಾಗ ಬೇರೆ ಕನಸ್ಸಿಗೆ ಜಾಗ ಎಲ್ಲಿದೆ.”

“ಸೀರೆ ಊಟ್ಟೊರೆಲ್ಲ ಒಳ್ಳೆಯವರಾಗಿರಲ್ಲ,,ಜೀನ್ಸ್ ಹಾಕಿರೋರೆಲ್ಲ ಕೆಟ್ಟೋರಾಗಿರಲ್ಲ,, ಗುಣ ಅನ್ನೋದು ಹಾಕಿರೋ ಬಟ್ಟೇಲಿರಲ್ಲ ನಡೆದುಕೊಳ್ಳುವ ರೀತಿಲಿ ಇರುತ್ತೆ.”

“ಇರುಳ ಪಯಣವದು ನನ್ನೊಳಗೆ ಎದೆ ಬಡಿತದ ದಾರಿಯು ನಿನ್ನೆಡೆಗೆ ನಾ ನಿನ್ನ ಹೆಜ್ಜೆಯ ನೋಡುತಲಿ ನಿನ್ನ ನೆನಪ ನೆನೆಯುತ ಕುಳಿತಿಹೆನು ಕಾಲ್ಗೆಜ್ಜೆ ಸಪ್ಪಳ ಕೇಳುತಲಿ ಸಿಹಿ ಕನಸೊಂದ ನಾ ಹೆಣೆಯುತಲಿ.”

“ಭಾವಶರಾದಿಯ ಪರದೆಯ ಮರೆಯಲಿ ನಾಚುತ ನಿಂತಿಹ ಸಖಿಯ ಮೈಮಾಟದ ತಳುಕು ಬಳುಕಿನ ವಯ್ಯಾರದ ಚೆಲುವೆ ಶೃಂಗಾರ ಕಾವ್ಯಗಳಲ್ಲಿ ವರ್ಣಿಸಿ ಬರೆದಿಹ ಕವಿತೆಗೆ ಸ್ಫೂರ್ತಿಯ ಸೆಲೇನಿನಾಗಿರಲು.”

“ಮಂದಿರವ ಕಟ್ಟ ಹೊರಟಿಹರು ಜಗನ್ಮಾತೆಯ ಪ್ರತಿರೂಪಕೆ ರಕ್ಷಣೆ ಇಲ್ಲದ ರಾಮ ರಾಜ್ಯದಲ್ಲಿ,,ಮನುಷ್ಯತ್ವ ಮರೆತು ಮೆರೆದಿಹರು ರಾಕ್ಸಸರು ಸೀತೆಯ ರಕ್ಷೆಣೆಗೆ ಶ್ರೀರಾಮ ಬರಲಿಲ್ಲ ಶ್ರೀಕೃಷ್ಣ ಅವತರಿಸಲಿಲ್ಲ ಮಸೀದಿ ಮಂದಿರಗಳ ನಡುವೆ ಅವಳ ಉಸಿರು ನಿಲ್ಲಲಿಲ್ಲ.”

“ಮಾತು ಬಾರದೆ ಇರಭವುದು ಇವುಗಳ ಪ್ರೀತಿಯಲ್ಲಿ ಯಾವುದೇ ಮೋಸ ಕಪಟ ಇರುವುದಿಲ್ಲ.”
Feeling Quotes in Kannada

“ನೂರು ತಿರುವುಗಳ ಬದುಕಿನ ದಾರಿಗೆ ಜೊತೆಯಾಗುವವರು ಯಾರೋ ಕೊನೆಗೇ.”

“ನಿಮ್ಮಿಂದ ಯಾರದರೂ ಖುಷಿಂದ ಇರ್ತಾರೆ ಅಂದ್ರೆ ಅವರಿಗೋಸ್ಕರ ಸ್ವಲ್ಪ ಟೈಮ್ ಕೊಡಿ.”

“ನೋವಿನ ಬೆನ್ನಲ್ಲೇ ನಗು ಇರುತ್ತೆ ಅನ್ನೋದನ್ನ ಮರೀಬೇಡ.”

“ಕೆಲವು ಸಲ ಜವಾಬ್ದಾರಿಗಳು ವಯಸ್ಸನ್ನು ಮೀರಿ ನಿಲ್ಲಿಸುತ್ತವೆ.”

“ಸ್ವಪ್ನ ಸುಂದರಿ ಅವಳು ಸ್ವಪ್ನದಂತೆ ಕಾಡುಹಳು ಮನದ ಕವಿತೆಯಲಿ ಮರೆಯಾಗಿಹಳು ನನ್ನ ಕಲ್ಪನೆಯ ಕಥಯಲಿ ಭವಾನ್ವೇಷಿಣಿಯಾಗಿಹಳು.”

“ಹೆಚ್ಚು ನೋವು ಅನುಭವಿಸಿದವರು ಅವರು ಯಾರೊಂದಿಗೂ ಬೆರೆಯಲು ಇಷ್ಟ ಪಡೋದಿಲ್ಲ.”

“ಹುಣ್ಣಿಮೆಯ ರಾತ್ರಿಯ ತಂಪಲ್ಲಿ ಚಿಕ್ಕದೊಂದು ಕನಸು,, ಆ ಕನಸ ತುಂಬಾ ನಿನ್ನದೇ ಸುಂದರ ನಗುಮೊಗದ ಸೊಗಸು,, ನಿನ್ನ ಚೆಲುವ ನಡುಗೆಯ ನಾಜೂಕಿನ ವಯ್ಯಾರದ ವರ್ಚ್ಛಸ್ಸು,, ಹಾಲ್ಗೆನ್ನೆಯಲ್ಲಿ ತುಸು ಮೂಡಿದೆ ಸೌಂದರ್ಯದ ಮುನಿಸು.”

“ಅವಳೆಂದರೆ ತನ್ನ ಕಾಲ್ಗೆಜ್ಜೆಗು ನೆಪವೆಂದ ಹೇಳಿ ನನ್ನೆದೆ ಬಡಿತದ ಜೊತೆ ಹೆಜ್ಜೆ ಹಾಕಿ ಉಸಿರಾಡೊ ಶ್ವಾಸಕು ಪಾರಿಜಾತದಂತೆ ಕಂಪು ಸೂಸಿಸಲು ಚೆಂದದ ನಲ್ಲೆಯ ಹೆಜ್ಜೆಯ ಸಪ್ಪಳ ಹೃದಯ ಸೆಳೆಯುತಿದೆ ದಿನವಿಡಿ ಉಸಿರಿನ ರಾಗವಾಗಿ.”

“ಪ್ರೀತಿ ಅನ್ನೋ ರತ್ನ ಜೊತೆಗಿದ್ರೆ ಯಾರು ಬಡವರಲ್ಲ.”

“ಸೀರೆಯ ಸೆರಗಂಚಲಿ ಜೀಕುವ ಸಾಲು ಕುಚ್ಚಗಳಿಗೂ ಮನದಲ್ಲೇ ಮಾತಂತೆ ಈ ಸೌಂದರ್ಯದರಮನೆಯ ಪಟ್ಟದರಸಿಯ ಅಂದ ವರ್ಣಿಸಲುತಿರಲು ಪದಗಳೇ ಸೋಲುತಿಹುವಂತೆ ಕವಿಯ ಕಲ್ಪನೆಯಲ್ಲಿ.”

“ನಿರೀಕ್ಷಿಸಿದಷ್ಟು ನಿರ್ಲ್ಯಕ್ಷ್ಯ ಜಾಸ್ತಿ ಅಲ್ವ.”

“ಶಾಲೆಯಲ್ಲಿ ಪಾಠ ಕಲಿಸೋರು ಮಾತ್ರ ಗುರುಗಳಲ್ಲ, ಜೀವನದ ಪಾಠ ಕಲಿಸೋರು ಸಹ ಗುರುಗಳೇ.”

“ಅವಳ ಮುಗಳ್ನಗೆಯ ಮತ್ತಿಗೆ ಕವಿಯಲ್ಲದ ನಾ ಕವಿತೆಯಲಿ ಚಿತ್ರಿಸ ಹೊರಟಿರುವೆ ಅವಳ ನನ್ನ ಪ್ರತಿ ನಿದಿರೆಯಲು ಕಾಯಂ ಅತಿಥಿಯಾದವಳು ನನ್ನ ಸ್ವಪ್ನದ ದಾರಿಯಲ್ಲಿ ಹೊಂಗನಸ ವಿಹಾರಿಯಾದವಳು ಸ್ವಪ್ನದಂತೆಯೇ ಬಂದಳು ಕಣ್ತೆರೆಯುವ ಮುನ್ನವೇ ಮರೆಯಾದಳು.”

“ನಾ ನಿನ್ನ ಪ್ರೀತಿಯನ್ನು ಕಣ್ಣು ಮುಚ್ಚಿ ಒಪ್ಪಿಕೊಂಡಿದ್ದೆ ನೀ ನನ್ನ ಕಣ್ಣು ತೆರೆಸಿಬಿಟ್ಟೆ ಮೋಸದ ಪ್ರೀತಿಯಿಂದ,.”

“ಮುಂಜಾನೆಯ ಕಣ್ಣರೆಪ್ಪೆಯ ಕುಡಿ ನೋಟವು ನೀನೇ, ನನ್ನೆದೆಯೊಳು ಪ್ರತಿ ಎದೆಬಡಿತದ ಸ್ವರ ತಾಳವು ನೀನೇ ತುಟಿ ಅಂಚಿನ ಪ್ರತಿ ಮೆಲುಕಿನ ಊಯೆಹೂ ನೀನೇ,, ಯಾರೇ ನೀನು ನನ್ನೊಲವೆಡೆಗೆ ನಡೆದು ಪ್ರತಿ ಕನಸಲ್ಲಿ ಉಸಿರಲ್ಲಿ ಬೆರೆತು ಒಂಟಿ ಬದುಕಿನ ಪಯಣದಿ ನಿನ್ನ ಮುಗುಳುನಗುವುದು ವರವಾಗಿ ನನಗೆ ಕಲ್ಪನೆಯ ಕವಿತೆಯಲಿ ನಿನ್ನ ನಾ ಬರೆದೆ.”
Kannada Quotes About Life

“ಮನಸ್ಸಿನ ಮಾತುಗಳು ಮನದಲ್ಲೇ ಮಣೆಯಾಯಿತು.”

“ಈ ನಿನ್ನ ಮೌನದ ಅರ್ಥ ಏನು ಅನ್ನೋದು ಅರ್ಥ ಆಗ್ಲಿಲ್ಲ.”

“ನಾ ಕಂಡ ಸ್ವಚ್ಚಂದ ಹುಣ್ಣಿಮೇಯ ಬೆಳದಿಂಗಳು ನೀನು, ಬಾನಂಗಳದಿ ಹೊಳೆವ ನಕ್ಷತ್ರದ ತಿಳಿ ಹೊಳಪು ನೀನು, ಬಿಸಿಕಾಲದಿ ಮಳೆಹನಿಯ ಕಾಯುವ ಮೌನಿ ನಾನು, ಅರಿಯದೆ ಆದ ಪ್ರೀತಿಗೆ ನೀ ಇಟ್ಟ ಹೇಸರೇನು, ನಿಂತ ನೀರಾಗಿರುವ ನನ್ನೊಲವು ಸಿಹಿ ನೀರಾಗಿ ಹರಿಯುವುದೇನು, ಹಚ್ಚನು ಹೇಳಲಿ ಉತ್ತರ ಸಿಗದ ಒಲವಿನ ಪ್ರಶ್ನೆಗಳಿಗೆ ನಾನು.”

“ಮನುಷ್ಯ ಜನ್ಮ ಸುಂದರ, ಆದ್ರೆ ಜೀವನ ಸುಲಭ ಅಲ್ಲಾ.”

“ಸಮಸ್ಯೆಗಳಿಗೆ
ಚಿಂತೆ ಪರಿಹಾರ ಅಲ್ಲಾ.”

“ಹೇ ಮುದ್ದು ಪಾರಿವಾಳ ನನ್ನ ಫ್ರೆಂಡ್ಸ್ ಗೆ ಜಯ Good Night ಹೇಳಿ ಬಾ.”

“ಸಖಿಯ ಅಂತರಂಗದ ಒಲವ ಚೆಲುವ ಅಂದದ ಸಾಲುಗಳಲ್ಲಿ ಬರೆವ ನನಗೆ, ಬಿಳಿ ಚಂದಿರನ ಬೆಳಕನೀಡುತಿರೆ ಸಖಿಯ ಕನಸಿನೂರಿಗೆ ನಾ ಸೇರಲು ನನ್ನರಸಿ ನನ್ನರಸಿ ಬರಲು ನಾ ನಂಬಲೇ ಇದು ನನ್ನ ಕನಸ ಇಲ್ಲ ನನಸೆಂದು.”

“ದೂರ ಆಗೊದಿಕ್ಕೆ ನೂರು ಕಾರಣ ಇರಬಹುದು, ಆದ್ರೆ ಜೊತೆಯಾಗೋದಿಕ್ಕೆ ಒಂದು ಕಾರಣ ಸಾಕು ಮತ್ತೆ ಪ್ರೀತಿ ಚಿಗುರುತ್ತೆ.”

“ಸುಳ್ಳಿಗೆ ನೂರಾರು ಬಂಧುಗಳು, ಸತ್ಯಕ್ಕೆ ಸಾವಿರಾರು ಶತ್ರುಗಳು.”

“ಪ್ರೀತಿಯಲ್ಲಿ ಬರಿ ಖುಷಿ, ಸಂತೋಷ ಮಾತ್ರ ಇರುತ್ತೆ ಅನ್ಕೊಂಡಿದ್ದೆ, ಆದರೆ ಪ್ರೀತಿಯಲ್ಲಿ ನೋವು,ಕಣ್ಣೀರು, ದುಃಖ ಇರುತ್ತೆ ಅಂತ ಪ್ರೀತಿ ಮಾಡಿದಮೇಲೆ ಗೊತ್ತಾಯಿತು.”

“ಧರೆಯ ಮೇಲಿನ ರೂಪಸಿ ಇವಳು, ಆಕಾಶದಲ್ಲಿ ಮಿನುಗುವ ನಕ್ಷತ್ರ ಇವಳು, ಹೊಳೆಯುವ ಕಣ್ಣುಗಳ ಕಾಂತಿ ಇವಳು, ಕಡಲ ಮದ್ಯದಲ್ಲಿ ಸಿಗುವ ಸ್ವಾತಿಮುತ್ತು ಇವಳು, ಎಲ್ಲರನ್ನೂ ಪ್ರೀತಿಸುವ ನಿಷ್ಕಲ್ಮಶ ಗುಣದವಳು ನನ್ನ ತಂಗಿ ಇವಳು.”

“ನಿನ್ನಿ ಪ್ರೀತಿಗಾಗಿ ಕಾಯುತ್ತಿರುವ ಪ್ರೀತಿ.”

“ಕನಸಿನೂರಲಿ ಕಂಡ ಚೆಲುವೆ ನಯನದಿ ಅವಿತು ನಗೆಬೀರಿ ಚಂದದರಸನ ಮನ ಕದ್ದ ಮಾಯವಿಯ ನವಿರಾದ ತ್ವಚೆಯ ಇಳಿಜಾರಿನ ಮೈಮಾಟದ ಸೊಬಗಿಗೆ ತಲ್ಲಣಿಸುವುದು ರಸಿಕನ ಮನ ಕನಸಲ್ಲು ಕಾಡಿಸಿ ಮನ ಮೈ ಮರೆಸುವಳಿವಳು ಅರ್ಥವಾಗದ ಅವಳ ಕಣೋಟದಲ್ಲೇ.”

“ಹೆಜ್ಜೆ ಮರೆತು ನಾಚಿ ನಿಂತಿದ್ದ ನನಗೆ ಕಾಲ್ಗೆಜ್ಜೆಗಳು ಕಚಗುಳಿಯಿಟ್ಟು ಎಚ್ಚರಿಸಿದವು.”

“ಮಳೆಗಾಲದ ಮುಸ್ಸಂಜೆಯ ಮಳೆಹನಿಯಲಿ ನನ್ನವಳೊಂದಿಗೆ ಪ್ರೀತಿ ಚಿಗುರೊಡೆದು ಮೂಡಿದ ಕಾಮನಬಿಲ್ಲಂತ.”
Kannada Quotes for Students

“ನಮ್ಮೂಡ್ಗ ಎಲ್ಲಿದಾನೋ ಗೊತ್ತಿಲ್ಲಾ, ಅವ್ನು ರಾಮನೋ, ಕೃಷ್ಟಾನೋ ಗೊತ್ತಿಲ್ಲ, ಸಿಕ್ಕಿದ್ಮೇಲೆ ಅನ್ನಿಗೆ ನಾನೇ ಸೀತೆ, ನಾನೇ ರಾಧೆ, ಎಲ್ಲಾನು ನಾನೇ ಆಗಿರಬೇಕು.”

“ನಾನು ಬೇಕು ಅನ್ನೋರು ನನ್ನಿಂದ ತಪ್ಪು ನಡೆದರೆ ಬುದ್ದಿ ಹೇಳುತ್ತಾರೆ ಬೇಡವಾದವರು ಅದನ್ನೆ ಕಾರಣವಾಗಿಟ್ಟುಕೊಂಡು ದೂರ ಹೋಗುತ್ತಾರೆ.”

“ಪ್ರೀತಿ ಎಂಬ ಪುಟದಲ್ಲಿ ನಾ ! ಓದದೇ ಉಳಿಸಿದ ಅಧ್ಯಾಯ ನಿನ್ನವಾಗಿರಬಹುದು ಅನ್ಸುತ್ತೆ.”

“ಪ್ರೇರಣೆ ಯಾರಿಂದಲಾದರೂ ಪಡೆಯಬಹುದು, ಸಂಕಲ್ಪ ಮಾಡಿ ಕೆಲಸ ಮಾಡುವ ನಿಶ್ವಯ ಮಾಡಬೇಕಾದವರು ನೀವೇ.”

“ಸಾಕಿನ್ನು ನಂಬೋದು ಬೇಡ ಮತ್ತೆ ಮತ್ತೆ ಮೋಸ ಹೋಗೋದು ಬೇಡ.”

“ಪರರಿಗೋಸ್ಕರ ಏನನ್ನೂ ತ್ಯಾಗ ಮಾಡಬೇಡ, ಪರರು ಇತರಿರಗೋಸ್ಕರ ನಿಮ್ಮನ್ನು ತ್ಯಾಗ ಮಾಡಿಬಿಡುತ್ತಾರೆ.”

“ಈ ಜೀವನ ಬಸ್ಸಿನ ಜರ್ನಿ ಇದ್ದಂಗೆ ಲೈಫಲ್ಲಿ ತೊಂದರೆ ಇಲ್ಲದಂಗೆ ಬಸ್ ಖಾಲಿ ಇದ್ರೆ ಕಿಟಕಿ ಸೈಡ್ ಸೀಟ್ ಬೇಕು ಅನ್ಸುತ್ತೆ, ಅದೇ ಲೈಫ್ ಕಷ್ಟದಿಂದ ತುಂಬಿ ರಶ್ ಇದ್ರೆ ಎಲ್ಲಾದ್ರೂ ಪರವಾಗಿಲ್ಲ ಸೀಟ್ ಸಿಕ್ರೆ ಸಾಕಪ್ಪ ಅನ್ಸುತ್ತೆ.”

“ಬದುಕಿನಲ್ಲಿ ನೆಮ್ಮದಿ ಬೇಕು ಎನ್ನುವುದು ನಿಮ್ಮ ಆಸೆಯಾಗಿದ್ದರೆ, ಮೊದಲು ಇನ್ನೊಬ್ಬರ ಜೊತೆ ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕು.”

“ನಿನ್ನ ಮೌನದ ಅವಶ್ಯಕತೆ ಇರುವ ಜನರ ಮುಂದೆ ನಿನ್ನ ಮಾತುಗಳನ್ನು ವ್ಯರ್ಥ ಮಾಡಬೇಡ.”

“ನಿಮಗೊಸ್ಕರ ನೀವು ಬದುಕಿ, ನಿಮ್ಮ ತಂದೆ ತಾಯಿಗೋಸ್ಕರ ನೀವು ಬದುಕಿ, ಬೇರೆ ಯಾರು ಶಾಶ್ವತವಲ್ಲ ನಿಮ್ಮ ಉಪಯೋಗ ಮುಗಿದ ಮೇಲೆ ಎಲ್ಲರೂ ನಿಮ್ಮನ್ನು ಬಿಟ್ಟು ಹೋಗುತ್ತಾರೆ.”

“ಎಲ್ಲರೊಂದಿಗೆ ಸೌಜನ್ಯವಿರಲಿ, ಕೆಲವರೊಂದಿಗೆ ಮಾತ್ರ ಸಲಿಗೆ ಇರಲಿ.”

“ಇವತ್ತಿನ ಬದುಕು ಹೇಗೆಂದರೆ ಎಲ್ಲರಿಗೂ ಎಲ್ಲವೂ ಇದೆ, ಆದರೆ ಯಾರಿಗೂ ನೆಮ್ಮದಿ ಇಲ್ಲ.”

“ನೀರು ಇಲ್ಲದ ಬಾವಿ ಹತ್ತಿರ, ದುಡ್ಡು ಇಲ್ಲದ ಮನುಷ್ಯನ ಹತ್ತಿರ ಯಾರೂ ಬರಲ್ಲ.”

“ಮನಸ್ಸು ಒಳ್ಳೆ ಕೆಲಸ ಮಾಡಿಸುವದಕಿಂತ, ಕೆಟ್ಟ ಕೆಲಸಗಳನ್ನೇ ಜಾಸ್ತಿ ಮಾಡಿಸುತ್ತೆ.”

“ನೀನು ಎಲ್ಲಿಯವರೆಗೆ ಉಪಯೋಗಕ್ಕೆ ಬರುತ್ತೀಯೋ, ಅಲ್ಲಿಯವರೆಗೆ ನಿನ್ನನ್ನು ಪ್ರೀತಿಸುತ್ತಾರೆ.”
Kannada Quotes in English

“ನನಗೆ ಕಣ್ಣಾಮುಚ್ಚಾಲೆ ಆಟ ಮೈದಾನದಲ್ಲಿ ಆಡಿ ಅಷ್ಟೇ ಗೊತ್ತಿತ್ತು… ಬದುಕಲ್ಲೂ ಕೂಡ ಆಡ್ತಾರೆ ಅಂತ ಅವಳಿಂದಲೆ ಗೊತ್ತಾಗಿದ್ದು.”

“ನೀನು ಯಾಕೆ ನನ್ನ AVOID ಮಾಡ್ತಿದ್ದೀಯ ಅಂತ ಗೊತ್ತಿಲ್ಲ ಕಣೋ… ಆದರೆ ನಾನು ಮಾತ್ರ ಯಾವಾಗಲೂ ನಿನ್ನದೇ ನೆನಪಲ್ಲಿ… ಇರ್ತೀನಿ.”

“ಗುಳಿಕೆನ್ನೆ ಮುಗದವಳೆ ಗುರ್ ಅನ್ಬೇಡ,, ಗುಂಗುರ ಕೂದಲವಳೆ ಗುರಾಯಿಸ್ಟೇಡ,, ಮುಗುತ್ತಿ ಸುಂದರಿಯೆ ಮುನಿಸ್ಕೊಬೇಡ,, ಆಲ್ಗೆಯ ಗೆಳತಿ ನಿನ್ನ ನಗುವಿಂದ ನನ್ನ ಹಾಳುಮಾಡಬ್ಯಾಡ.”

“ನೀನು ನನ್ನ ಎಷ್ಟು ಅಂತ ನೋಯಿಸಬಹುದು ಅಬ್ಬಬ್ಬಾ ಅಂದ್ರೆ ನಾನು ಸಾಯೋತನಕ ಆಮೇಲೆ ನೀನೆ ಪ್ರೀತಿಸ್ತೀನಿ ಅಂದರೂ ನಾನೇ ಇರಲ್ಲ.”

“ಇಷ್ಟಪಟ್ಟವರನ್ನು ಮರೆಯೋಣ ಅಂದರೆ ಆ ನೆನಪು ನಮ್ಮನ್ನು ಮರೆಯೋಕೆ ಬಿಡಲ್ಲ ಜೊತೆಗೆ ಪ್ರಶ್ನೆ ಬೇರೆ ಮಾಡುತ್ತೆ ಇಷ್ಟೇನಾ ನಿನ್ನ ಪ್ರೀತಿ ಅಂತ.”

“ಕೆಲವರು ನಮಗೆ ನೋವಾಗೊ ರೀತಿ ನಡೆದುಕೊಂಡು ಕೊನೆಗೆ ನಾವೇ ಅವರಿಗೆ ನೋವು ಮಾಡಿದ್ದಿವಿ ಅನ್ನೋ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.”

“ಇನ್ನೊಬ್ಬರ ಕಷ್ಟದ ಅಥವಾ ಕೆಟ್ಟ ಪರಿಸ್ಥಿತಿಯನ್ನು ನೋಡಿ ನಗಬಾರದು… ಯಾರಿಗೆ ಗೊತ್ತು ನಾಳೆ ನಮಗೂ ಅಂತಹ ಪರಿಸ್ಥಿತಿ ಬರಬಹುದು.”

“ಗೆಲುವು ನಮನ್ನು ಜಗತ್ತಿಗೆ ಪರಿಚಯಿಸಿದರೆ, ಸೋಲು ನಮಗೆ ಜಗತ್ತನ್ನು ಪರಿಚಯಿಸುತ್ತದೆ.”

“ಯಾವುದನ್ನೇ ಆಗಲಿ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಮೇಲೆ ಪಡೆದು ಕೊಳ್ಳುವ ಮನಸ್ಸು ಮಾಡಲೇ ಬಾರದು.”

“ಕೆಲವರು ಬದುಕಿನಲ್ಲಿ ವರವಾಗಿ ಬಂದರೆ, ಇನ್ನೂ ಕೆಲವರು ಪಾಠವಾಗಿ ಬರುತ್ತಾರೆ. ಬದುಕು ಚೆನ್ನಾಗಿ ತಿಳಿಯಬೇಕೆಂದರೆ ಇಬ್ಬರು ಬೇಕಾಗುತ್ತಾರೆ.”

“ಅವಳ ನನಗೆಂದೆ ಕೆತ್ತಿರುವ ಬ್ರಹ್ಮ ನಿಜವಾಗಿಯೂ ಅದ್ಭುತ ಶಿಲ್ಪಿ ಮನೆಯಲ್ಲಿ ಇದ್ದು ಇದ್ದು ಇತ್ತೀಚೆಗೆ ಆಗಿರುವಳು ಸ್ವಲ್ಪ ಕೆಂಪಿ ಕಚ್ಚಿ ತಿನ್ನಬೇಕೆನಿಸುವ ಅವಳ ಕೆನ್ನೆ ನನಗೆ..ಕೈಗೆಟುಕದ ಕುಲ್ಪಿ ನನ್ನೆದುರು ಬರದೆ..ನಾಚುವ ಸುಂದರಿ ಅವಳೇ ನನ್ನಾಕೆ.”

“ಗೆಳತಿ ಕನಸೊಂದು ನೀನಾಗಿ, ನನ್ನೆದುರು ಬಂದಂತೆ.. ಕವಿಯಾಗಿ ನಾನು ಪದಗಳಲಿ ಕರೆದಂತೆ ಹೊರಟ ಹಾದಿಯ ಮರೆತು ಹಗಲಲ್ಲಿ ನಾ ಹಾಳಾದಂತೆ. ಕೈಯಿಡಿದು ನೀ ನನ್ನ ಜೊತೆಯಲ್ಲೇ ಇರುವಂತೆ.”

“ಪ್ರತಿಯೊಂದು ಹನಿ ಕಣ್ಣೀರಲ್ಲೂ ಅವನ ನೆನಪಿರುತ್ತೆ… ಎಷ್ಟು ಸರಿ ಹೊರಗೆ ಹಾಕಿದ್ರು ಮತ್ತೆ ಮತ್ತೆ ಬರ್ತಾನೆ ಇರುತ್ತೆ.”

“ಹೊಸ ಪರಿಚಯಗಳು ಆದಂತೆ ಸಹಜವಾಗಿ ನಡೆಯೋದು ಅಂದರೆ…ನಾವು ಬೇಕು ಅನ್ನುವವರು ನಮಗೆ ಸಿಗಲ್ಲ ನಮ್ಮನ್ನ ಬಯಸೋರಿಗೆ ನಾವು ಸಿಗಲ್ಲ.”
Kannada Quotes for Instagram

“ಮುಂಗೋಪದ ಮೂಗಿಗೆ ಮೂಗುತಿ ಇಟ್ಟವನು ನನ್ನವನು.”

“ಈ ಘಟನೆಗೆ ಕಾರಣನೂ ನಾನೇ, ಪರಿಹಾರವೂ ನಾನೇ ಎಂದು ಒಪ್ಪಿಕೊಳ್ಳುವುದೇ “ಜವಾಬ್ದಾರಿ”.”

“ನನ್ನ ಕನಸುಗಳು. ಹೇಗೆಅಗಿದಾವೇ ಅಂದ್ರೇ ನಿಂತನೀರಿನ ಹಾಗೇ, ಎಷ್ಟು ಹೊಸ ನೀರು ಸೇರಿದರು ತಿಳಿಯಾಗದ ಹಾಗೆ.”

“ಸಮಸ್ಯೆಗಳು ಬಂದಾಗ ಮೊದಲು ಅದನ್ನು ಅರ್ಥ ಮಾಡಿಕೊಳ್ಳಿ, ಆಮೇಲೆ ತಾಳ್ಮೆಯಿಂದ ಆಲೋಚಿಸಿ, ಕೊನೆಗೆ ನಗು-ನಗುತ್ತಲೇ ಮಾನವೀಯತೆಯನ್ನು ಮುಂದಿಟ್ಟುಕೊಂಡು ಪರಿಹಾರ ಹುಡುಕಿಕೊಳ್ಳಿ.”

“ಕೆಲವು ಸಂಬಂಧಗಳು ಹೇಗೆಂದರೆ ಮೊಬೈಲ್ ಇಂದ ಆರಂಭವಾಗಿ ಕೊನೆಗೂ ಮೊಬೈಲ್ ಇಂದನೇ ಅಂತ್ಯವಾಗುತ್ತವೆ.”

“ಮುಗಿದು ಹೋದ ಅಧ್ಯಾಯಕ್ಕೇ ಮತ್ತೇ ಮುನ್ನುಡಿ ಬರೆಯುವ ಮನಸ್ಸು ನನಗಿಲ್ಲ.”

“ನಯ ವಿನಯದ ನಯನ ನಿನ್ನ ಮೌನದಲ್ಲೆ ಮಾತಿನ ಸವಿಗಾನ ನೋವು ನಗಿಸಿ ಹೇಳುವಳು ಸಾಂತ್ವನ, ಮೊಗಕೆ ಮುಗಳ್ನಗಿಸಿ ಮನಸೆಳೆದಳು ನನ್ನ.”

“ನನ್ನ ಬಿಟ್ಟು ಹೋಗೋದೇನೋ ಹೋದೆ ಜೊತೆಗೇ ನೀನು ಕೊಟ್ಟ ನೆನಪುಗಳನ್ನು ಏಕೆ ಬಿಟ್ಟು ಹೋದೆ.”

“ಬದುಕು ಕಲಿಸಿತು ಅನ್ನೋದಕ್ಕಿಂತ, ಬದುಕಿನಲ್ಲಿ ಬಂದು ಹೋದ ಜನರು ತುಂಬಾ ಕಲಿಸಿದ್ರು, ಅಂತ ಹೇಳಬಹುದು.”

“ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ಕೇವಲ ತಾತ್ಕಾಲಿಕ ಆಗಿರುತ್ತವೆ.”

“ಅಂದಿನ ನಗುವೇ ಇಂದಿಲ್ಲ ಅಂದಮೇಲೆ, ಇಂದಿನ ಕಷ್ಟ ಮುಂದೆಯೂ ಇರುವುದಿಲ್ಲ.”

“ಅವಶ್ಯಕತೆ ಮುಗಿದ ಮೇಲೆ ದೇಹದಿಂದ ಆತ್ಮವೂ ಕೂಡ ಹೋಗುತ್ತದೆ. ಈ ಮನುಷ್ಯ ಯಾವ ಲೆಕ್ಕ.”

“ಮನುಷ್ಯ ಅತ್ತೂ ಏನು ಕಲಿಯುವುದಿಲ್ಲ, ನಕ್ಕೂ ಏನು ಕಲಿಯುವುದಿಲ್ಲ , ಏನನ್ನಾದರೂ ಕಲಿಯುವುದಾದರೆ, ಯಾರನ್ನಾದರನ್ನು ಕಳೆದುಕೊಂಡಾಗ ಇಲ್ಲವೇ ಪಡೆದುಕೊಂಡಾಗ ಮಾತ್ರ.”

“ನಮ್ಮ ಪಾದವನ್ನು ಕಾಯುವ ಚಪ್ಪಲಿಯನ್ನು ರಕ್ಷಿಸುವವನಿಗೆ ಕೊಡುವ ಹಣಕ್ಕೂ ಚೌಕಾಸಿ ಮಾಡುವ ನಾವು ಎಲ್ಲೋ ಇರುವ ದೇವರು ನಮ್ಮ ರಕ್ಷಿಸುತ್ತಾನೆಂದು ಹುಂಡಿ ತುಂಬಿಸುತ್ತಿದ್ದೇವೆ.”

“ಬದುಕಿನ ಪ್ರತೀ ಬಿಂದುವಿನಲ್ಲೂ ಹೊಸತೊಂದರ ಆರಂಭವಿದೆ, ಪ್ರತೀ ಭಾರಿ ಬಿದ್ದು ಎದ್ದಾಗಲೂ ಹೊಸ ಪಾಠ ಕಲಿಯಲಿಕ್ಕಿದೆ.”
Kannada Quotes Funny

“ಸಖಿಯ ಚೆಲುವ ಮೊಗದ ಬೆಳದಿಂಗಳಲಿ ಬೆಳ್ಳಿ ಮೋಡಗಳು ದಿಬ್ಬಣ ಹೊರಟಿವೆ, ನನ್ನ ಸುಂದರ ಕನಸುಗಳ ಹೊತ್ತು.”

“ಪ್ರತಿ ಕನಸಲು ಕಲ್ಪನೆಯಲ್ಲಿ ಮುಳುಗಿ,ನಿನ್ನಂದದ ಊಹೆಯಲಿ ಬದುಕಿರುವ ನನ್ನೊಳಗಿನ ಭಾವದಲೆಯ ಕವಿತೆಯ ಸಾಲಲಿ, ಸ್ವಪ್ನದ ಕಿರುನೆನಪಿನ ನೆಪವಾದ ನೀ,, ಇರುಳ ಸಂತೆಯ ಸೊಬಗಿನಲಿ ಜಾರಿದ ಮನಸಿನ ಭಾವಕ ಮುಗಿಯದ ಕಲ್ಪನೆಯ ಕವಿತೆಯಾದೆ ನೀ.”

“ಬದುಕು ನಮ್ಮನ್ನ ಎಷ್ಟೆ ನೋಯಿಸಿದರು ನಾವು ಮುಂದೆ ಸಾಗಲೆ ಬೇಕು, ನಮ್ಮಗಾಗಿ ಅಲ್ಲದಿದ್ದರು ನಮ್ಮವರಿಗಾಗಿ.”

“ಮುಗುಳುನಗುತಿಹ ಮಂದಾಕಿನಿಯ ಮುತ್ತಿನ ಮೂಗುತಿಯು ನಿನ್ನ ಮುಂಗುರುಳ ಜೊತೆ ಆಡುತಿರೆ ನಿನ್ನ ಮೊಗದ ನಗುವಿಗೆ ನನ್ನ ಮನದಿ ಕವಿತೆಯ ಸಾಲು ಮೂಡುತಿತ್ತು.”

“ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ, ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯ.”

“ನಿಮ್ಮ ಪರಿಚಯದವರು ನಿಮ್ಮನ್ನು ಕುರಿತು ನೀವು ಬದಲಾಗಿ ಬಿಟ್ಟಿದ್ದೀರಿ ಎಂದು ಹೇಳಿದರೆ, ನೀವು ಅವರಿಷ್ಟದಂತೆ ಬದುಕುವುದನ್ನು ನಿಲ್ಲಿಸಿದ್ದೀರಿ ಎಂದರ್ಥ.”

“ಮನಸ್ಸಲ್ಲಿ ಪ್ರೀತಿ ತುಂಬಿ, ದ್ವೇಷ ಅಳಿಸಿಹೋಗುತ್ತೆ.”

“ಮೋಸ ಮಾಡಿದವರನ್ನು ಕ್ಷಮಿಸುವಷ್ಟು ಉದಾರಿಯಾಗಬೇಕು ನಿಜ, ಆದರೆ, ಅವರನ್ನೇ ಮತ್ತೆ ಮತ್ತೆ ನಂಬುವಷ್ಟು ಮೂರ್ಖರಾಗಬಾರದು.”

“ಕೆಲವೊಮ್ಮೆ ನಾನು ಕೂಡ ಎಲ್ಲರಿಗಿಂತ ವಿಶೇಷ ಅನ್ಸುತ್ತೆ, ಯಾಕೇ ಅಂತ ನನಗೂ ತಿಳಿದಿಲ್ಲ.”

“ಅಹಂಕಾರ ಸತ್ಯವನ್ನು ಒಪ್ಪಲು ಬಿಡುವುದಿಲ್ಲ, ವಿನಯಶೀಲರಾಗಿದ್ದರೆ ಒಳಿತು.”

“ಕೆಲವು ಹುಡುಗರಿಗೆ ಹುಡುಗೀರನ್ನ ರೇಗಿಸುವುದು, ಚುಡಾಯಿಸುವುದು, ಅಂದ್ರೆ ಅದೇನ್ ಖುಷಿನೋ.”

“ವಿಶ್ವಾಸ ಇರೋಕಡೆ ವಿಷ ಕೊಟ್ರು ಕುಡಿಬೋದು, ಆದ್ರೆ ನಂಬಿಕೆ ಇಲ್ಲದ ಜಾಗದಲ್ಲಿ ನಮ್ಮ ನೆರಳು ಸುಳಿಯಬಾರದು.”

“ಪ್ರೀತಿ ನೋವು ಕೊಡುತ್ತೆ ನಿಜ, ಆದ್ರೆ ಆ ನೋವನ್ನು ಮರೆಸುವ ಶಕ್ತಿ ಇರೋದು ಸಹ ಪ್ರೀತಿಗೆ.”

“ಒಲವ ದ್ವನಿಯೊಳ್ ಬೆರೆತಿದೆ ಕಲ್ಪನೆಯ, ಮುಗಿಯದ ಅವಳ ಬಣ್ಣನೆಯಲಿ ಎದೆಹ ತೀರದಿ ಕಡಲ ಭಾವದಲೆಯೊಡಗೂಡಿ ಅವಳ ಬರುವಿಕೆಯ ಕಾದ ಹೃದಯಕೆ, ಅಧರ ಬೆಸೆಯಲು ಮಧುರ ದ್ವನಿಯೋಳು ಉಸಿರು ಮೀಟಿದ ಹೊಸತು ರಾಗಕೆ, ಮುನ್ನುಡಿಯ ಗೀಚಿ ಮರೆಯಾದಳು ಕಲ್ಪನೆಯಲೊಕದ್ದಲಿ.”

“ಮೂರ್ಖತನವೆಂದರೆ, ಬೆಲೆ ಸಿಗುತ್ತಿದ್ದ ಜಾಗ ಬಿಟ್ಟು, ಬೆಲೆಯಿಲ್ಲದ ಜಾಗದಲ್ಲಿ ಬೆಲೆಗಾಗಿ ಬಾಯಿ ಬಡಿದುಕೊಳ್ಳುವುದು.”
ಕನ್ನಡ Quotes Text

“ಜೀವನವೆಂಬ ನಿಲ್ಲದ ಪಯಣದಲ್ಲಿ ನಿರಾಸೆಗಳೇ ಜಾಸ್ತಿ.”

“ಒಬ್ಬರನ್ನು ಪ್ರೀತಿಸುವುದಕ್ಕೆ ಯಾವುದೇ ಕಾಠಣ ಇರುವುದಿಲ್ಲ. “ಪ್ರೀತಿ ಕೇವಲ ಪ್ರೀತಿ” ಅಷ್ಟೇ, ಒಂದುವೇಳೆ ಕಾಠಣವಿದ್ದರೆ ಅದು ಪ್ರೀತಿಯೇ ಅಲ್ಲ.. ಕೇವಲ ” ಒಪ್ಪಿಗೆ ಆ ಅನಿಸುತ್ತದೆ.”

“ಇತ್ತೀಚಿಗೆ ಮೌನದ ಕುರುಡುತನ ಕತ್ತಲೆಯಲ್ಲಿ ಹೆಚ್ಚಾಗುತ್ತಿದೆ.”

“ಕೃಷ್ಣ ಶಬ್ದವಾಗಿದ್ದರೆ ಅದರ ಅರ್ಥ ರಾಧೆ, ಕೃಷ್ಣ ಗೀತೆಯಾದರೆ ರಾಧೆ ಸಂಗೀತ, ಕೃಷ್ಣ ಕೊಳಲಾಗಿದರೆ ಅದರ ಸ್ವರ ರಾಧೇ, ಕೃಷ್ಣ ಸಮುದ್ರವಾಗಿದ್ದರೆ, ರಾಧೆ ತರಂಗ, ಕೃಷ್ಣ ಹೂವಿಗಿದ್ದರೆ ಅದರ ಸುಗಂಧ ರಾಧೇ, ರಾಧೆಯಿಂದಲೇ ಕೃಷ್ಣ, ಕೃಷ್ಣನಿಂದಲೇ ರಾಧೆ.”

“ಕಪಟ ಜ್ಞಾನಿಗಳ ಮುಂದೆ ಅಪ್ಪಟ ಜ್ಞಾನಿಯಾಗಿ ಬದುಕು.”

“ಗಟ್ಟಿಯಾದ ನಿರ್ಧಾರಗಳು ಬದುಕನ್ನು ಬದಲಾಯಿಸುತ್ತವೆ.”

“ರಾಧೆಯ ಏಕಾಂತ, ಕೃಷ್ಣನಿಗೆ ಹೊಸತೇನ ಆಗಿರಲಿಲ್ಲ, ಯಾಕೆಂದರೆ ? ರಾಧೆ ಏಕಾಂತ ವಾಗಿರುತ್ತಿದ್ದದ್ದು ಕೃಷ್ಣನ ಹೃದಯದಲ್ಲಿ.”

“ಬಹುದೂರ ಹೋಗುವ ಮುನ್ನ ನಿನ್ನಲ್ಲಿ ನೀ ಹುಡುಕು ಒಳ್ಳೆಯತನ.”

“ತೆರೆಯ ಮೇಲಿನ ಬದುಕಿಗಾಗಿ ಈ ಹೋರಾಟದ ಬದುಕು.”

“ಏನೇ ನೋವಾದರು ಜಗವನ್ನು ಗೆಲ್ಲು.”

“ಕೊನೆಯಿರದ ಎಕಾಂತದಲ್ಲಿ ದಡ ಸೇರುವ ಹಂಬಲ.”

“ಪ್ರೇಮ ಎರಡ ಅಕ್ಷರದ ಈ ಪದ ಎಷ್ಟು ಸರಳ ಆದರೆ ಅದರ ದಾರಿ ಕಠಿಣ.”

“ಕೂಗಿ ಕೂಗಿ ಕರೆಯುತ್ತಿರುವೆ. ಒಮ್ಮೆ ದನಿ ಕೇಳಿ ನನ್ನೊಡನೆ ಮಾತನಾಡೆಯಾ.. ನೀನಿಟ್ಟ ಪಾದದ ಗುರುತು ಹಿಡಿದು ಬದುಕುತ್ತಿರುವೆ.. ಒಮ್ಮೆ ಒಂದೆರಡು ಹೆಜ್ಜೆಯ ನಾದರು ನನ್ನೊಡನೆ ನಡೆವೆಯಾ, ರಾಧೇ.”

“ನಿಲ್ಲದ ಪಯಣಕ್ಕೆ ನಿರಾಸೆಯ ಮಾತು ಯೂಕೆ?.”

“ಸಮಯ ಪರಿಸ್ಥಿತಿಯ ಒಂದು ಭಾಗವಾಗಿದೆ.”
ಜೀವನವು ಅನೇಕ ಪಾಠಗಳನ್ನು ಕಲಿಸುತ್ತದೆ, ಮತ್ತು ಆ ಪಾಠಗಳನ್ನು ನಾವು ಯಾವ ದಿಶೆಯಲ್ಲಿ ತೆಗೆದುಕೊಳ್ಳುತ್ತೇವೋ ಅದು ನಮ್ಮ ಗೆಲುವಿಗೆ ದಾರಿ ತೋರಿಸುತ್ತದೆ. ಜೀವನದ ಕಷ್ಟಗಳು ಮತ್ತು ಸವಾಲುಗಳು ನಮ್ಮನ್ನು ಶಕ್ತಿಶಾಲಿಗಳಾಗಿ ರೂಪಿಸುತ್ತವೆ. ಜೀವನದ ಸೊಗಸುಗಳು, ಸವಿನೆನಪುಗಳು, ಮತ್ತು ಸ್ಪೂರ್ತಿದಾಯಕ ಜೀವನ ಕ್ವೋಟ್ಸ್. ನಾವು ಜೀವನದ ಹಾದಿಯಲ್ಲಿ ಸದಾ ಧೈರ್ಯವಂತರಾಗಲು ನೆರವಾಗುತ್ತವೆ.
ಈ ಕ್ವೋಟ್ಸ್ಗಳು ನಿಮ್ಮ ಮನಸ್ಸಿಗೆ ಬಲ ನೀಡಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಪ್ರೇರಣೆ ನೀಡುವಂತೆ ಈ ಪಾಠಗಳನ್ನು ಬಳಸಿ, ಹೊಸದು ಜೀರ್ಣಿಸಿ, ಉತ್ತಮ ದಿಕ್ಕಿನಲ್ಲಿ ಮುಂದುವರೆಯಿರಿ.